ನಾಳೆ(ನ.30) ವಿದ್ಯುತ್‌ ನಿಲುಗಡೆ

0

ಪುತ್ತೂರು: ವಿವೇಕಾನಂದ ಕಾಲೇಜು ಹತ್ತಿರ ಇರುವ ರೈಲ್ವೆ ಬ್ರಿಡ್ಜ್‌ ಬಳಿಯಲ್ಲಿನ ಎಚ್‌ ಟಿ /ಎಲ್‌ ಟಿ ಲೈನ್‌ ಸ್ಥಳಾಂತರ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ಕೆದಿಲ, ಕಬಕ, ಮತ್ತು ನಗರ ಫೀಡರ್‌ ನಲ್ಲಿ ನ.30ರಂದು ಗುರುವಾರ ಪೂರ್ವಾಹ್ನ ಬೆಳಿಗ್ಗೆ 8:00 ರಿಂದ ಅಪರಾಹ್ನ 5:00 ರವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು. ಆದ್ದರಿಂದ 110/33/11 ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಫೀಡರ್‌ ನಿಂದ ವಿದ್ಯುತ್‌ ಸರಬರಾಜಾಗುವ ನಗರ, ಕೊಡಿಪ್ಪಾಡಿ, ಪಡ್ನೂರು , ನವನಗರ, ವಿವೇಕಾನಂದ ಕಾಲೇಜು ಪರಿಸರ ಮತ್ತು ಪಡ್ಡಾಯೂರು ಗ್ರಾಮದ ವಿದ್ಯುತ್‌ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here