ಕುಂಬ್ರದಲ್ಲಿ ಕ್ರೀಡಾ ಕಾರಂಜಿ ಕ್ರೀಡಾಜ್ಯೋತಿಗೆ ಸ್ವಾಗತ

0

ಪುತ್ತೂರು: ಕಾರಂತರ ಕರ್ಮಭೂಮಿ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ 17 ರ ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟ ಕ್ರೀಡಾ ಕಾರಂಜಿಯ ಕ್ರೀಡಾಜ್ಯೋತಿಯನ್ನು ಕುಂಬ್ರದಲ್ಲಿ ಸ್ವಾಗತಿಸಲಾಯಿತು.

ಒಳಮೊಗ್ರು ಗ್ರಾಪಂ ವಠಾರಕ್ಕೆ ಆಗಮಿಸಿದ ಕ್ರೀಡಾಜ್ಯೋತಿಯನ್ನು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಬಿ.ಸಿ ಚಿತ್ರಾ, ಶಾರದಾ, ಲತೀಫ್ ಟೈಲರ್ ಹಾಗೂ ಪಂಚಾಯತ್ ಸಿಬ್ಬಂದಿಗಳು, ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು, ಮುಖ್ಯಗುರು ಮಮತಾ ಹಾಗೂ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಸ್ವಾಗತಿಸಿದರು.

LEAVE A REPLY

Please enter your comment!
Please enter your name here