ತಾಲೂಕು ಮಟ್ಟದ ಪ್ರತಿಭಾ ಕಾರಂಜಿ- ನವೋದಯ ಪ್ರೌಢಶಾಲೆಗೆ ಹಲವು ಬಹುಮಾನ

0

ಪುತ್ತೂರು:ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ 2023 ರ ಸ್ಪರ್ಧೆಯು ಕೆಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ನವೋದಯ ಪ್ರೌಢ ಶಾಲೆಯ ವಲಯ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಥಮ 1 ಹಾಗೂ ದ್ವಿತೀಯ 2 , ಒಟ್ಟು 3 ಬಹುಮಾನಗಳು ಬಂದಿರುತ್ತವೆ. ಸಂಸ್ಕೃತ ಭಾಷಣದಲ್ಲಿ 10ನೇ ತರಗತಿಯ ಶಿಲ್ಪ ಪ್ರಥಮ ಸ್ಥಾನ, 10ನೇ ತರಗತಿಯ ಶ್ರವಣ್ ಯನ್ ಮತ್ತು ಮಾನಸ್ ಬಿ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ , ಅರೇಬಿಕ್ ಧಾರ್ಮಿಕ ಪಠಣದಲ್ಲಿ ಮಹಮ್ಮದ್ ಆದಿಲ್ ಶಾ ದ್ವಿತೀಯ ಸ್ಥಾನ ಪಡೆದಿದ್ದಾರೆ . ಶಾಲೆಯ ಅಧ್ಯಾಪಕ ವೃಂದದವರು ತರಬೇತಿ ಮತ್ತು ಮಾರ್ಗದರ್ಶನ ನೀಡಿ ಸಹಕರಿಸಿದರು, ಎಂದು ಮುಖ್ಯ ಗುರು ಪುಷ್ಪಾವತಿ ಎಸ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here