ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ

0

ಪುತ್ತೂರು: ವಾಣಿಜ್ಯ ವಿಭಾಗ, ಘಟಕ ಕಾಲೇಜು ನೆಲ್ಯಾಡಿ ಇದರ ವತಿಯಿಂದ ವಿದ್ಯಾರ್ಥಿಗಳಿಗೆ ನಿಯೋಜಿತ ಕಾರ್ಯ ಮತ್ತು ಸಂಶೋಧನ ವಿಷಯದ ಬಗ್ಗೆ ಮಾಹಿತಿ ನೀಡಲಾಯಿತು. ಅಧ್ಯಕ್ಷೀಯ ನುಡಿಗಳನ್ನಾಡಿದ ವೆರೋನಿಕಾ ಪ್ರಭಾರವರು ವಿದ್ಯಾರ್ಥಿಗಳು ತಮ್ಮಲ್ಲಿ ಸಂಶೋಧನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ಪಾವನ, ನಿಶ್ಮಿತ, ಚಂದ್ರಕಲಾ, ದಿವ್ಯಶ್ರೀ ರವರು “ನಿಯೋಜಿತ ಕಾರ್ಯ ಮತ್ತು ಸಂಶೋಧನ” ವಿಷಯದ ಬಗ್ಗೆ ಮಕ್ಕಳಿಗೆ ಸಂಪೂರ್ಣ ಅರಿವನ್ನು ಮೂಡಿಸಿದರು.  ವಿದ್ಯಾರ್ಥಿನಿ ಭಾರತಿ ಕಾರ್ಯಕ್ರಮ ನಿರೂಪಿಸಿದರು. ಕು.ಶಿಲ್ಪ ಎಲ್ಲರಿಗೂ ಸ್ವಾಗತಿಸಿ ಕುಮಾರಿ ಅವಮ್ಮಾ ವಂದಾನರ್ಪನೆಗೈದರು.

LEAVE A REPLY

Please enter your comment!
Please enter your name here