ಉಪ್ಪಿನಂಗಡಿ: ಪೇಟೆಗೆ ಬಂದ ಹೆಬ್ಬಾವು

0

ಉಪ್ಪಿನಂಗಡಿ: ಇಲ್ಲಿನ ರೂಪಕಲಾ ಸ್ಟುಡಿಯೋ ಮುಂಭಾಗದ ವಾಣಿಜ್ಯ ಸಂಕೀರ್ಣದಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ವ್ಯಾಪಾರಿಗಳಲ್ಲಿ ಭೀತಿಯನ್ನು ಮೂಡಿಸಿದ ಘಟನೆ ಶುಕ್ರವಾರ ನಡೆದಿದೆ.


ವಾಣಿಜ್ಯ ಸಂಕೀರ್ಣದ ಒಂದು ಮೂಲೆಯಲ್ಲಿ ಹೆಬ್ಬಾವೊಂದು ಇರುವುದನ್ನು ಕಂಡು ಗಾಬರಿಗೊಂಡ ವ್ಯಾಪಾರಿಗಳು ಹಾವನ್ನು ಓಡಿಸಲು ಯತ್ನಿಸಿದರು. ಆದರೆ ಯಾವುದನ್ನೋ ತಿಂದು ವಿಶ್ರಾಂತಿ ಪಡೆಯುತ್ತಿದ್ದ ಹೆಬ್ಬಾವು ಕದಲಲು ಒಪ್ಪದಿದ್ದಾಗ, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಹರೀಶ್ ಬಂಡಾರಿ ರವರು ಹಾವನ್ನು ಸಣ್ಣ ಡ್ರಮ್ ನೊಳಕ್ಕೆ ನುಸುಳುವಂತೆ ಮಾಡಿ, ಡ್ರಮ್ ನಲ್ಲಿ ಸೆರೆ ಹಿಡಿದು ಸಣ್ಣಂಪಾಡಿ ಕಾಡಿಗೆ ಸುರಕ್ಷಿತವಾಗಿ ಬಿಟ್ಟರು. ಈ ಮೂಲಕ ವ್ಯಾಪಾರಿಗಳ ಮನದಲ್ಲಿ ಮೂಡಿದ್ದ ಭೀತಿಯನ್ನು ನಿವಾರಿಸಿದರು.

LEAVE A REPLY

Please enter your comment!
Please enter your name here