ಹಿಂಜಾವೇ ಪುತ್ತೂರು ಜಿಲ್ಲಾ ಬೈಠಕ್‌- ಹಲವರಿಗೆ ಜವಾಬ್ದಾರಿ ಘೋಷಣೆ

0

ಪುತ್ತೂರು: ಹಿಂದು ಜಾಗರಣ ವೇದಿಕೆಯ ಪುತ್ತೂರು ಮತ್ತು ಸುಳ್ಯ ತಾಲೂಕಿಗೆ ಸಂಬಂಧಿಸಿ ಪುತ್ತೂರು ಪಂಚವಟಿಯಲ್ಲಿ ಡಿ.17ರಂದು ನಡೆದ ಪುತ್ತೂರು ಜಿಲ್ಲಾ ಬೈಠಕ್‌ ನಲ್ಲಿ ಹಲವು ಕಾರ್ಯಕರ್ತರಿಗೆ ವಿವಿಧ ಪ್ರಮುಖ ಜವಾಬ್ದಾರಿಯನ್ನು ಘೋಷಣೆ ಮಾಡಲಾಗಿದೆ.


ಹಿಂದು ಜಾಗರಣ ವೇದಿಕೆ ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಸಾಂತ್ ಬೆಂಗಳೂರು, ಮೋಹನ್‌ದಾಸ್, ಭರತ್ ಮತ್ತು ದಿನೇಶ್ ಪಂಜಿಗ ಅವರ ಉಪಸ್ಥಿತಿಯಲ್ಲಿ ಜವಾಬ್ದಾರಿಗಳನ್ನು ಘೋಷಣೆ ಮಾಡಲಾಗಿದ್ದು, ಜಿಲ್ಲಾ ಕಾರ್ಯಕಾರಿಣಿ ನಿಧಿ ಸದಸ್ಯರಾಗಿ ಅನುಪ್ ಎಣ್ಮೂರು, ಸಂಪರ್ಕ ಸದಸ್ಯರಾಗಿ ಸತೀಶ್ ಮೂಕಮಲೆ, ಸುಳ್ಯ ತಾಲೂಕು ಸಂಯೋಜಕರಾಗಿ ಸಚಿನ್ ವಳಲಂಬೆ, ಸಹ ಸಂಯೋಜಕರಾಗಿ ವಿನೋದ್ ಸುಬ್ರಹ್ಮಣ್ಯ, ಸುಳ್ಯ ತಾಲೂಕು ಕಾರ್ಯಕಾರಿಣಿ ಯುವ ಸದಸ್ಯರಾಗಿ ಹರ್ಷಿತ್ ಗುತ್ತಿಗಾರ್, ಸುಳ್ಯ ತಾಲೂಕು ಕಾರ್ಯಕಾರಿಣಿ ಸಂಪರ್ಕ ಸದಸ್ಯರಾಗಿ ದಯಾನಂದ ಪಂಜ, ಪುತ್ತೂರು ತಾಲೂಕು ಸಂಯೋಜಕರು ಕೀರ್ತೇಶ್ ಮುಕ್ವ, ಸಹ ಸಂಯೋಜಕರಾಗಿ ಶಿವಪ್ರಸಾದ್ ಶಾಂತಿಗೋಡು, ಪುತ್ತೂರು ತಾಲುಕು ಕಾರ್ಯಕಾರಿಣಿ ಯುವ ಸದಸ್ಯರಾಗಿ ಮನೀಶ್ ಬಿರ್ವ, ಸಂಪರ್ಕ ಸದಸ್ಯರಾಗಿ ಪರಮೇಶ್ವರ ಬಡಗನೂರು, ಮಾಹಿತಿ ಸಂಗ್ರಹಣೆ ಸದಸ್ಯರಾಗಿ ಶ್ರೀಧರ್ ಎಡ್ಯಾಡಿ ಅವರನ್ನು ಘೋಷಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here