ಮಂಗಳೂರು ಟ್ರೋಫಿ- ಫಸ್ಟ್ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ – ಉಪ್ಪಿನಂಗಡಿ ಶ್ರೀರಾಮ ಶಾಲೆಗೆ ಹಲವು ಪ್ರಶಸ್ತಿ

0

ಉಪ್ಪಿನಂಗಡಿ:ಉಪ್ಪಿನಂಗಡಿ ಶ್ರೀರಾಮ ಶಾಲೆ ವೇದಶಂಕರನಗರ ವಿದ್ಯಾರ್ಥಿಗಳು ಮಂಗಳೂರು ಟ್ರೋಫಿ- ಫಸ್ಟ್ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.ಕುಮಿಟಿ ವಿಭಾಗದಲ್ಲಿ ದೈವಿಕ್.ಬಿ ಪ್ರಥಮ, ಕಟಾದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.ಕಟಾ ವಿಭಾಗದಲ್ಲಿ ಅಗಸ್ತ್ಯ.ಐ ಪ್ರಥಮ ಸ್ಥಾನ ,ಕಟಾ ವಿಭಾಗದಲ್ಲಿ ಭವನ್ ಎಂ.ಆರ್ ತೃತೀಯ ಸ್ಥಾನ, ಕಟಾ ವಿಭಾಗದಲ್ಲಿ ವೇಣುಗೋಪಾಲ.ಬಿ ತೃತೀಯ ಸ್ಥಾನ ಪಡೆದಿದ್ದಾರೆ. ಶಾಲೆಯ ಕರಾಟೆ ತರಬೇತುದಾರ ಚಂದ್ರಶೇಖರ.ಕೆ ಇವರು ತರಬೇತಿ ನೀಡಿರುತ್ತಾರೆ. ವಿಜೇತರಿಗೆ ಶಾಲೆಯ ಆಡಳಿತ ಮಂಡಳಿಯು ಅಭಿನಂದನೆ ಸಲ್ಲಿಸಿರುತ್ತದೆ.

LEAVE A REPLY

Please enter your comment!
Please enter your name here