ಉಪ್ಪಿನಂಗಡಿ: ನೇಣು ಬಿಗಿದು ಆತ್ಮಹತ್ಯೆ

0

ಉಪ್ಪಿನಂಗಡಿ: ಇಲ್ಲಿನ ಸಮೀಪದ ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಶಿವರಾಮಕೋಡಿ ಎಂಬಲ್ಲಿನ ನಿವಾಸಿ ನಾರಾಯಣ ಮೂಲ್ಯ (63) ಎಂಬವರು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಡಿ.18ರಂದು ನಡೆದಿದೆ.


ಕಳೆದೆರಡು ವರ್ಷಗಳಿಂದ ದೇಹಾರೋಗ್ಯ ಕುಸಿದು ಮಾನಸಿಕ ವೇದನೆಗೆ ತುತ್ತಾಗಿದ್ದ ಇವರು ಮನೆಯಂಗಳದಲ್ಲಿದ್ದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದಿರುತ್ತಾರೆಂದು ಮೃತರ ಪತ್ನಿ ಕೆ ಸುಂದರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here