![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು:ಕುರಿಯ ಗ್ರಾಮದ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.5 ಮತ್ತು 6ರಂದು ನಡೆಯುವ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯು ಡಿ.18ರಂದು ದೇವಸ್ಥಾನದಲ್ಲಿ ನಡೆಯಿತು.
ಆಮಂತ್ರಣವನ್ನು ದೇವಳದ ಗರ್ಭಗುಡಿಯಲ್ಲಿ ಇಟ್ಟು ಪ್ರಾರ್ಥನೆ ಸಲ್ಲಿಸಿದ ಬಳಿಕ ನಮಸ್ಕಾರ ಮಂಟಪದ ಮುಂದೆ ಆಮಂತ್ರಣ ಪತ್ರ ಬಿಡುಗಡೆ ಮಾಡಲಾಯಿತು.ಅರ್ಚಕರಾದ ಪ್ರಕಾಶ್ ರಾವ್ ಕೊಡ್ಲಾರು, ಗುರುರಾಜ್ ಮಡುಕುಲ್ಲಾಯ, ವಿಷ್ಣುಮೂರ್ತಿ ಬಡೆಕ್ಕಿಲಾಯ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು, ಸದಸ್ಯರಾದ ಶಶಿಧರ್ ಕಿನ್ನಿಮಜಲು, ನೋಣಾಲು ಜೈರಾಜ್ ಭಂಡಾರಿ, ಜಯಶೀಲ ರೈ ಏಳ್ನಾಡುಗುತ್ತು ಕುರಿಯ, ಧನರಾಜ್ ಅಲೇಖಿ, ಅರುಣಾ ಪಿ ರೈ, ಅರುಣಾ ಜಿ ರೈ ಬಳ್ಳಮಜಲುಗುತ್ತು, ವಿಷ್ಣುಸೇವಾ ಸಮಿತಿ ಗೌರವಾಧ್ಯಕ್ಷ ಶಿವರಾಮ ಆಳ್ವ ಬಳ್ಳಮಜಲುಗುತ್ತು, ಉಪಾಧ್ಯಕ್ಷ ವಿಶ್ವನಾಥ್ ರೈ ನಿರಾಲ, ಗೌರವ ಸಲಹೆಗಾರರಾದ ರವೀಂದ್ರನಾಥ ರೈ ಬಳ್ಳಮಜಲುಗುತ್ತು, ಚಂದ್ರಹಾಸ ರೈ ತುಂಬೆದಕೋಡಿ, ಬಾಲಚಂದ್ರ ರೈ ಕುರಿಯ ಏಳ್ನಾಡುಗುತ್ತು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.