ಜ.5: ನೆಲ್ಯಾಡಿಯಲ್ಲಿ ಸಮರ್ಥ ನಿಧಿ ಲಿಮಿಟೆಡ್‌ನ 17ನೇ ಶಾಖೆ ಶುಭಾರಂಭ

0

ನೆಲ್ಯಾಡಿ: ಭಾರತ ಸರ್ಕಾರದಿಂದ ಮಾನ್ಯತೆ ಪಡೆದು ಹಣಕಾಸು ಉದ್ದಿಮೆಯಲ್ಲಿ ಕಳೆದ 10 ವರ್ಷಗಳಿಂದ ತೊಡಗಿಕೊಂಡಿರುವ ಸಮರ್ಥ ನಿಧಿ ಲಿಮಿಟೆಡ್ ಇದರ 17ನೇ ಶಾಖೆ ನೆಲ್ಯಾಡಿ ಡಿಯೋನ್ ಸ್ಕ್ವೇರ್‌ನ 2ನೇ ಮಹಡಿಯಲ್ಲಿ ಜ.5ರಂದು ಬೆಳಿಗ್ಗೆ 12.05ಕ್ಕೆ ಉದ್ಘಾಟನೆಗೊಳ್ಳಲಿದೆ.


ಉದ್ಘಾಟನಾ ಸಮಾರಂಭದಲ್ಲಿ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ.ವರ್ಗೀಸ್ ಕೈಪನಡ್ಕ ಒಐಸಿ, ಡಿಯೋನ್ ಸ್ಕ್ವೇರ್ ಕಟ್ಟಡದ ಮಾಲಕರಾದ ಎ.ಕೆ.ವರ್ಗೀಸ್, ನೆಲ್ಯಾಡಿ ಹೊರಠಾಣೆಯ ಹೆಡ್‌ಕಾನ್‌ಸ್ಟೇಬಲ್ ಕುಶಾಲಪ್ಪ ನಾಯ್ಕ್, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ ಎಂ.ಡಿ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ನವೀನ್ ಕುಮಾರ್ ಕೆ.,ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು, ಸುಳ್ಯ, ಹಾಸನ, ಸಕಲೇಶಪುರ, ತಿಪಟೂರು, ಬೆಳ್ತಂಗಡಿ, ಅರಸೀಕೆರೆ, ಬೇಲೂರು, ಕಡಬ, ಮಡಿಕೇರಿ, ಚಿಕ್ಕಮಗಳೂರು, ತರೀಕೆರೆ, ಮೈಸೂರು, ಮಂಗಳೂರು, ತುಮಕೂರು, ಶಿವಮೊಗ್ಗದಲ್ಲಿ ಸಮರ್ಥ ನಿಧಿ ಲಿಮಿಟೆಡ್‌ನ ಶಾಖೆಗಳು ಇವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here