ಉಪ್ಪಿನಂಗಡಿ: ಯುವಕ ನಾಪತ್ತೆ ದೂರು

0

ಉಪ್ಪಿನಂಗಡಿ: ಇಲ್ಲಿನ ಮಾಣಿಮಾರು ಎಂಬಲ್ಲಿ ಬೇಕರಿ ಉತ್ಪನ್ನ ತಯಾರಿಕಾ ಘಟಕವೊಂದರಲ್ಲಿ ಕೆಲಸಕ್ಕಿದ್ದ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.


ಸರಪಾಡಿ ಗ್ರಾಮದ ಮಠದಬೆಟ್ಟು ನಿವಾಸಿ ಸುದೀಪ (20) ನಾಪತ್ತೆಯಾದ ವ್ಯಕ್ತಿ. ಈತ ಇಳಂತಿಲ ಗ್ರಾಮದ ಮಾಣಿಮಾರು ಎಂಬಲ್ಲಿ ಬೇಕರಿ ಉತ್ಪನ್ನ ತಯಾರಿಕಾ ಘಟಕವೊಂದರಲ್ಲಿ ಕೆಲಸಕ್ಕಿದ್ದು, ಈತನಿಗೆ ಈತನ ತಂದೆ ದಿನೇಶ ನಾಯ್ಕ ಎಂಬವರು ಜ.5ರಂದು ದೂರವಾಣಿ ಕರೆ ಮಾಡಿದ್ದು, ನಾಳೆ ಮನೆಗೆ ಬರಬೇಕೆಂದು ತಿಳಿಸಿದ್ದರು. ಆದರೆ ಮರುದಿನ ಸುದೀಪನು ಬಾರದೇ ಇದ್ದಾಗ ಈತನ ತಂದೆ ಈತನಿಗೆ ಮೊಬೈಲ್ ಕರೆ ಮಾಡಿದ್ದು, ಆಗ ಈತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಳಿಕ ಇವರ ಎರಡನೇ ಮಗ ಸಂದೀಪ್ ಎಂಬವನು ಈತ ಕೆಲಸ ಮಾಡುತ್ತಿದ್ದಲ್ಲಿಗೆ ಬಂದು ವಿಚಾರಿಸಿದಾಗ ಸುದೀಪ್ ನಿನ್ನೆಯಿಂದಲೇ ರಜೆ ಮಾಡಿ ಹೋಗಿರುವುದಾಗಿ ತಿಳಿದು ಬಂತು. ಸಂಬಂಧಿಕ ಮನೆಯಲ್ಲಿಯೂ ಈತ ಪತ್ತೆಯಾಗದಿದ್ದಾಗ ಈತನ ತಂದೆ ಉಪ್ಪಿನಂಗಡಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here