ಕುರಿಯ ಏಳ್ನಾಡುಗುತ್ತು ತರವಾಡು ದೈವಸ್ಥಾನಕ್ಕೆ ಕೈ ತೊಳೆಯುವ ಸ್ಟೀಲ್ ಸಿಂಕ್ ಕೊಡುಗೆ

0

ಪುತ್ತೂರು: ಕುರಿಯ ಏಳ್ನಾಡುಗುತ್ತು ತರವಾಡು ದೈವಸ್ಥಾನಕ್ಕೆ ಜ.14 ರಂದು ಮಕರ ಸಂಕ್ರಮಣದಂದು ತಂಬಿಲ ಸೇವೆಯ ಕಾರ್ಯಕ್ರಮದ ಸಂದರ್ಭ ಕುರಿಯ ಮಾಡಾವು ಬೇರಿಕೆ ದಿ.ಶಿವಮ್ಮರವರ ಸ್ಮರಣಾರ್ಥ ಮಕ್ಕಳಾದ ವಿಶ್ವನಾಥ ರೈ ಹಾಗೂ ಸಹೋದರರು ಹಾಗೂ ಮೊಮ್ಮಕ್ಕಳು ರೂ. 22,000 ರೂಪಾಯಿ ಬೆಲೆ ಬಾಳುವ ಸ್ಟೀಲ್ ನ 5 ಟ್ಯಾಪ್ ಹೊಂದಿರುವ ಕೈ ತೊಳೆಯುವ ದೊಡ್ಡ ಸಿಂಕ್ ನ್ನು ದೈವಸ್ಥಾನಕ್ಕೆ ಕೊಡುಗೆಯಾಗಿ ನೀಡಿದರು.


ದೈವಸ್ಥಾನದ ಕೆ ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು ರವರು ಕೊಡುಗೆಯನ್ನು ಸ್ವೀಕರಿಸಿ, ಮನೆಯವರಿಗೆ ಕುಟುಂಬದ ದೈವ ದೇವರು ಹಾಗೂ ಗುರು ಹಿರಿಯರು ಸಕಲ ಸಂಪತ್ತು ಐಶ್ವರ್ಯ ಆಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು. ತಿಂಗಳ ಮಕರ ಸಂಕ್ರಮಣ ಪ್ರಯುಕ್ತ ಗೀತಾ ಲೋಹಿತ್ ಭಂಡಾರಿ ಮತ್ತು ಸಹೋದರಿ ಮತ್ತು ಮಕ್ಕಳು ಇವರಿಂದ ತಂಬಿಲ ಸೇವೆ ನಡೆಯಿತು.

LEAVE A REPLY

Please enter your comment!
Please enter your name here