ಉಪ್ಪಿನಂಗಡಿ: ಬಿದ್ದು ಸಿಕ್ಕಿದ ಚಿನ್ನಾಭರಣ ಹಿಂದಿರುಗಿಸಿದ ಅಟೋ ಚಾಲಕ

0

ಉಪ್ಪಿನಂಗಡಿ: ಬಿದ್ದು ಸಿಕ್ಕಿದ 75 ಸಾವಿರ ರೂ. ಮೌಲ್ಯದ ಚಿನ್ನಾಭರಣವನ್ನು ಅಟೋ ಚಾಲಕರೋರ್ವರು ಅದರ ವಾರೀಸುದಾರರಿಗೆ ಹಿಂದುರಿಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.


ಅಟೋ ಚಾಲಕ ದಯಾನಂದ ಕಲ್ಲಾಪು ಅವರಿಗೆ ಉಪ್ಪಿನಂಗಡಿಯ ಶೆಣೈ ಸ್ವೀಟ್ಸ್ ಬಳಿ 75 ಸಾವಿರ ರೂ. ಮೌಲ್ಯದ ಚಿನ್ನಾಭರಣ ಬಿದ್ದು ಸಿಕ್ಕಿತ್ತು. ಅದನ್ನು ಅವರು ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕ ಸಂಘದವರ ಗಮನಕ್ಕೆ ಹಾಗೂ ಅಲ್ಲೇ ಇರುವ ಫೈನಾನ್ಸ್ ಸಂಸ್ಥೆಯವರ ಗಮನಕ್ಕೆ ತಂದಿದ್ದು, ಬಳಿಕ ವಾರೀಸುದಾರರನ್ನು ಪತ್ತೆ ಹಚ್ಚುವ ಕಾರ್ಯ ನಡೆದಾಗ ಅದು ದಾರಂದಕುಕ್ಕುವಿನ ಇರ್ಷಾದ್ ಬಿ.ಕೆ. ಅವರಿಗೆ ಸೇರಿದ್ದು ಎಂದು ತಿಳಿದು ಬಂತು. ಬಳಿಕ ಅದನ್ನು ಇರ್ಷಾದ್ ಅವರಿಗೆ ನೀಡಲಾಯಿತು. ಈ ಸಂದರ್ಭ ನೇತ್ರಾವತಿ ಅಟೋ ಚಾಲಕ ಮಾಲಕರ ಸಂಘದ ಮಜೀದ್ ರಾಮನಗರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here