ಕಡಬ: ಬೈಕ್ ಪಾರ್ಕಿಂಗ್ ವಿಚಾರದಲ್ಲಿ ಹಲ್ಲೆ ಪ್ರಕರಣ-ಕೇಸು ದಾಖಲಿಸಲು ನ್ಯಾಯಾಲಯದಿಂದ ಆದೇಶ

0

ಕಡಬ: ಕಡಬ ಪೇಟೆಯ ಅಂಗಡಿಯೊಂದರ ಮುಂಭಾಗ ವ್ಯಕ್ತಿಯೋರ್ವರು ಬೈಕ್ ಪಾಕಿಂಗ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಗೆ ಸಂಬಂಧಿಸಿ ನ್ಯಾಯಾಲಯದ ಆದೇಶದ ಮೇರೆಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.


ಘಟನೆ ವಿವರ:
ಕಡಬ ತಾಲೂಕಿನ ಕುಂತೂರು ಗ್ರಾಮದ ಹಡಿಲು ನಿವಾಸಿಯಾಗಿರುವ ಪದ್ಮನಾಭ ರೈ ಎಂಬುವವರು ಜನವರಿ.3 ರಂದು ಕಡಬ ಪೇಟೆಯಲಿರುವ ಐಡಿಯಲ್ ಕಾಂಪ್ಲೆಕ್ಸ್‌ನಲ್ಲಿರುವ ತನ್ನ ಐಡಿಯಲ್ ವಾಚ್ ವರ್ಕ್ಸ್ ಅಂಗಡಿ ಮುಂಭಾಗ ಟೋಮ್‌ಬಜಾರ್ ಮಾಲಕ, ಮರ್ದಾಳ ಗ್ರಾಮದ ಕರ್ಮಾಯಿ ಸಮೀಪದ ಪುಯಿಲ ನಿವಾಸಿ ಕೆ ಟಿ ತೋಮ್ಸನ್ ಎಂಬವರ ಪುತ್ರ ಅವೀಶ್ ಎಂಬವರು ಬೈಕ್ ಪಾಕಿಂಗ್ ಮಾಡಿದ್ದು, ಈ ವೇಳೆ ಬೈಕ್‌ಗೆ ಹ್ಯಾಂಡ್‌ಲಾಕ್ ಹಾಕದಂತೆ ತಿಳಿಸಿದಾಗ ಪದ್ಮನಾಭ ರೈ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಹೋದರರಾದ ಭವಿಷ್, ಅಜೇಶ್ ಎಂಬವರ ಜೊತೆಗೂಡಿ ಪದ್ಮನಾಭ ರೈಯವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಪದ್ಮನಾಭ ರೈ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಿದರೂ ಪ್ರಕರಣ ದಾಖಲಾಗದ ಕಾರಣ ಪದ್ಮನಾಭ ರೈ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯದ ಆದೇಶ ಮೇರೆಗೆ ಮೂವರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here