ಹಂಟ್ಯಾರು-ಬೆಟ್ಟಂಪಾಡಿ: ಬಳಕ್ಕ ಎಂಬಲ್ಲಿ ರಸ್ತೆ ಅಗಲೀಕರಣ-ಪರ್ಯಾಯ ರಸ್ತೆಗೆ ಸೂಚನೆ

0

ಪುತ್ತೂರು: ತಾಲೂಕಿನ ಹಂಟ್ಯಾರು-ಬೆಟ್ಟಂಪಾಡಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಒಂದು ಕಿ.ಮೀ. ಅಪಘಾತ ವಲಯವಾದ ಬಳಕ್ಕ ಎಂಬಲ್ಲಿ ರಸ್ತೆ ಅಗಲೀಕರಣಕ್ಕಾಗಿ ತುರ್ತು ಕಾಮಗಾರಿ ನಡೆಯಲಿರುವುದರಿಂದ ಫೆ.3 ರಿಂದ 12 ರ ತನಕ ಘನ ವಾಹನ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಈ ಅಗತ್ಯ ಕಾಮಗಾರಿ ನಡೆಯಲಿದ್ದು, ಲಘು ವಾಹನ ಹೊರತುಪಡಿಸಿ ಘನ ವಾಹನ ಸಂಚಾರ ಸ್ಥಗಿತಗೊಳಿಸಲಾಗುವುದು. ಕೆ.ಎಸ್.ಆರ್.ಟಿ.ಸಿ., ಖಾಸಗಿ ಬಸ್ ಪುತ್ತೂರು-ದೇವಸ್ಯ-ಚೆಲ್ಯಡ್ಕ ರಸ್ತೆ ಮೂಲಕ ಸಂಚಾರ, ಇತರ ಸರಕು ಸಾಗಾಣಿಕಾ ಘನ ವಾಹನಗಳು ಕೌಡಿಚ್ಚಾರ್-ರೆಂಜ ರಸ್ತೆ ಮೂಲಕ ಸಂಚರಿಸುವಂತೆ ತಿಳಿಸಿದೆ.

LEAVE A REPLY

Please enter your comment!
Please enter your name here