ಫೆ.10: ರೆಂಜಲಾಡಿಯಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಫೆ.10ರಂದು ರೆಂಜಲಾಡಿಯಲ್ಲಿ ಆರ್.ಐ.ಸಿ ವತಿಯಿಂದ ನಡೆಯಲಿರುವ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮದ ಸ್ವಾಗತ ಸಮಿತಿ ಸಭೆ ಫೆ.1ರಂದು ರೆಂಜಲಾಡಿ ಮಸೀದಿ ವಠಾರದಲ್ಲಿ ನಡೆಯಿತು.
ಆರ್.ಐ.ಸಿ ಮುಖ್ಯಸ್ಥ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಆರ್‌ಐಸಿ ವತಿಯಿಂದ ಫೆ.9ರಂದು ಕಥಾ ಪ್ರಸಂಗ ನಡೆಯಲಿದ್ದು ಫೆ.10ರಂದು ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವದಲ್ಲಿ ನೂರೇ ಅಜ್ಮೀರ್ ಬೃಹತ್ ಆಧ್ಯಾತ್ಮಿಕ ಮಜ್ಲಿಸ್ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದು ಕಾರ್ಯಕ್ರಮ ಯಶಸ್ಸಿಗೆ ಸರ್ವ ಸಿದ್ದತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಅಬ್ಬಾಸ್ ಮುಸ್ಲಿಯಾರ್ ಕಟ್ಟತ್ತಡ್ಕ, ಯೂಸುಫ್ ರೆಂಜಲಾಡಿ, ಆರ್.ಎಂ ಅಲೀ ಹಾಜಿ ರೆಂಜಲಾಡಿ, ನಝೀರ್ ಮೊದಲಾದವರು ಮಾತನಾಡಿದರು. ಝುಬೈರ್ ಎಂಬವರಿಗೆ ಆಮಂತ್ರಣ ಪತ್ರಿಕೆ ನೀಡುವ ಮೂಲಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಉಮ್ಮರ್ ಸುಲ್ತಾನ್ ಸ್ವಾಗತಿಸಿದರು. ಪಿ.ಕೆ ಮಹಮ್ಮದ್ ವಂದಿಸಿದರು. ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here