ಬೆದರಿಕೆ ಕರೆ-ಸ್ಟುಡಿಯೋ ಮಾಲಕನಿಂದ ದೂರು

0

ಪುತ್ತೂರು:ಪುತ್ತೂರಿನ ನೆಹರು ನಗರದಲ್ಲಿ ಕೆಲವು ತಿಂಗಳ ಹಿಂದೆ ನಡೆದ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಯ ಸಹೋದರ,ಸ್ಟುಡಿಯೋ ಮಾಲಕನಿಗೆ ಬೆದರಿಕೆ ಕರೆ ಬಂದಿರುವುದಾಗಿ ವರದಿಯಾಗಿದೆ.

ಫೆ.19ರ ರಾತ್ರಿ ಕೊಲೆ ಬೆದರಿಕೆ ಕರೆ ಬಂದಿರುವುದಾಗಿ ಸ್ಟುಡಿಯೋ ಮಾಲಕ ಮನೋಜ್ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.ಮನೋಜ್ ಅವರ ಸಹೋದರ ಮನೀಷ್ ಅವರು ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಯಾಗಿದ್ದು ಇದೀಗ ಅವರ ಸಹೋದರನಿಗೆ ಕೊಲೆ ಬೆದರಿಕೆ ಕರೆ ಬಂದಿದ್ದು ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ.

LEAVE A REPLY

Please enter your comment!
Please enter your name here