ಪುತ್ತೂರಿನಲ್ಲಿ ನೂತನ SCI ಉದ್ಘಾಟನೆ, ಪದಗ್ರಹಣ

0

ಪುತ್ತೂರು: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜಿಯನ್ ನಿಂದ ಆರಂಭವಾದ ಹೊಸ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಪುತ್ತೂರು ಲೀಜಿಯನ್ ನ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಬಪ್ಪಳಿಗೆ ಆಶ್ಮಿ ಕಂಫರ್ಟ್‌ನಲ್ಲಿ ನಡೆಯಿತು. ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜಿಯನ್ ನ ಅಧ್ಯಕ್ಷ Snr PPF ನಾರಾಯಣ ಎನ್ ಬಲ್ಯ ಆರಂಭದ ಅಧ್ಯಕ್ಷತೆ ವಹಿಸಿದ್ದರು. ಪೂರ್ವ ರಾಷ್ಟೀಯ ಅಧ್ಯಕ್ಷ Snr Csl PPF ಆಡಿ ಅರವಿಂದ್ ರಾವ್ ಕೆದಿಗೆರವರು ಹೊಸ ಪುತ್ತೂರು ಲೀಜಿಯನ್‌ನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಪುತ್ತೂರು SCI ಯ ನೂತನ ಸದಸ್ಯರಿಗೆ ರಾಷ್ಟೀಯ ಉಪಾಧ್ಯಕ್ಷರಾದ Snr PPF ಜಿ ಕೆ ಹರಿಪ್ರಸಾದ್ ರೈ ಪ್ರಮಾಣ ವಚನ ಬೋದಿಸಿದರು. ನೂತನ ಸ್ಥಾಪಕ ಅಧ್ಯಕ್ಷೆ ಮಲ್ಲಿಕಾ ಜೆ. ಆರ್ ರೈ ಗುಂಡ್ಯಡ್ಕ ಅವರಿಗೆ ನೆಲ್ಯಾಡಿ SCI ಅಧ್ಯಕ್ಷರಾದ Snr PPF ನಾರಾಯಣ ಓ ಬಲ್ಯ ಅಧ್ಯಕ್ಷೀಯ ಪ್ರಮಾಣ ವಚನ ನೀಡಿದರು. ಪುತ್ತೂರು SCI ನ ನೂತನ ಪದಾಧಿಕಾರಿಗಳಿಗೆ ಅಧ್ಯಕ್ಷೆ ಮಲ್ಲಿಕಾ ಜೆ. ಆರ್ ರೈ ಗುಂಡ್ಯಡ್ಕ ಪ್ರಮಾಣ ವಚನ ನೀಡಿದರು.

ನೂತನ ಪುತ್ತೂರು ಲೀಜಿಯನ್ ನ ಸ್ಥಾಪಕ ಕಾರ್ಯದರ್ಶಿಯಾಗಿ Snr ಎಂ.ಪಿ ರೋಹಿಣಿ ಆಚಾರ್ಯ ಹಾಗೂ ಸ್ಥಾಪಕ ಕೋಶಾಧಿಕಾರಿಯಾಗಿ Sಟಿಡಿ ಸುಮಂಗಲಾ ಶೆಣೈ ಪ್ರಮಾಣ ವಚನ ಸ್ವೀಕರಿಸಿದರು, ಸದಸ್ಯರಾದ ಅನ್ನಪೂರ್ಣಿಮಾ ಆರ್ ರೈ ಕುತ್ಯಾಡಿ, ವೀಣಾ ಬಿಕೆ, ಆಶಾಲತ ಎಕೆ, ಮಹಾಲಿಂಗ ನಾಯ್ಕ, ಪ್ರಹ್ಲಾದ್, ಉಷಾ ನಾಗೇಶ್, ಹರಿಣಾಕ್ಷಿ ಜೆ. ಶೆಟ್ಟಿ ನೆಲ್ಲಿಕಟ್ಟೆ, ಶಾರದಾ ಪ್ರಭು, ರಾಜೀವಿ ಸ್ಥಾಪಕ ಪದಾಧಿಕಾರಿಗಳಾಗಿ, ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಛೇರ್ಮನ್ ಖಣಟಿ ಸಂತೋಷ ಶೆಟ್ಟಿ ಪುತ್ತೂರು ಮಾತನಾಡಿ ಶುಭಹಾರೈಸಿದರು, ರಾಷ್ಟೀಯ ಉಪಾಧ್ಯಕ್ಷರಾದ Snr PPF ಜಿ ಕೆ ಹರಿಪ್ರಸಾದ್ ರೈ, ಅತಿಥಿಗಳಾದ ರಾಷ್ಟೀಯ ಸಮುದಾಯ ಅಭಿವೃದ್ಧಿ ವಿಭಾಗದ ಸಯೋಜಕರಾದ Snr PPF ಆಡಿ ಸದಾನಂದ ಕುಂದರ್, ನೆಲ್ಯಾಡಿ SCIಯ ಸ್ಥಾಪಕ ಅಧ್ಯಕ್ಷರಾದ Snr ಅಬ್ರಹಾಂ ವರ್ಗಿಸ್ ಶುಭ ಹಾರೈಸಿದರು, ಹೊಸ ಲೀಜಿಯನ್ ಉದ್ಘಾಟಕ ಪೂರ್ವ ರಾಷ್ಟೀಯ ಅಧ್ಯಕ್ಷ Snr Csl PPF ಆಡಿ ಅರವಿಂದ ರಾವ್ ಕೆದಿಗೆ ಮಾತನಾಡಿ ನೂತನವಾಗಿ ರಚನೆಗೊಂಡ ಪುತ್ತೂರು SCI ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸದಸ್ಯರಿಗೆ ಪಿನ್, ಕಾಲರ್, SCI ಪುತ್ತೂರು ಸ್ಥಾಪನೆಗೊಂಡ ದಿನಾಂಕ ಮುದ್ರಿತ ಗೊಂಡ ರಾಷ್ಟೀಯ ಅಧಿಕೃತ ಪತ್ರವನ್ನು ಹಾಗೂ ರಾಷ್ಟೀಯ ಮಟ್ಟದ ಪರಿಕರಗಳನ್ನು ಪುತ್ತೂರು ಲೀಜಿಯನ್‌ಗೆ ಹಸ್ತಾಂತರಿಸಿದರು.
SCI ಪುತ್ತೂರು ನೂತನ ಲೀಜಿಯನ್ ಪದಗ್ರಹಣ ಬಳಿಕ ಮಲ್ಲಿಕಾ ಜೆ.ಆರ್ ರೈ ಗುಂಡ್ಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರ ಸಹಕಾರ ಯಾಚಿಸಿದರು. ವೇದಿಕೆಗೆ ಅತಿಥಿಗಳನ್ನು SCI ನೆಲ್ಯಾಡಿ ಲೀಜಿಯನ್ ನ ಸ್ಥಾಪಕ ಸದಸ್ಯರಾದ Snr ರವೀಂದ್ರ ಟಿ ಬರಮಾಡಿಕೊಂಡರು, SCI ಪುತ್ತೂರು ಲೀಜಿಯನ್ ನ ಸ್ಥಾಪಕ ಸದಸ್ಯ Snr ರಾಜೀವಿ ಪ್ರಾರ್ಥಿಸಿ, SCI ನೆಲ್ಯಾಡಿಯ IPP Snr PPFR ವೆಂಕಟ್ರಮಣ ಸೀನಿಯರ್ ವಾಣಿ ವಾಚಿಸಿದರು, SCI ನೆಲ್ಯಾಡಿ ಲೀಜಿಯನ್ ಸೀನಿಯರೇಟ್ ವಿಭಾಗದ ಅಧ್ಯಕ್ಷರಾದ Snrt ಪುಷ್ಪಾ ನಾರಾಯಣ ಬಲ್ಯ ರವರು ನೂತನ ಅಧ್ಯಕ್ಷರಾದ Snr ಮಲ್ಲಿಕಾ ಜೆ ಆರ್ ರೈ ಗುಂಡ್ಯಡ್ಕ ರವರನ್ನು ಪರಿಚಯಿಸಿದರು, SCI ನೆಲ್ಯಾಡಿಯ ವಿವಿಧ ಪದಾಧಿಕಾರಿಗಳು Snr ವಿಶ್ವನಾಥ ಶೆಟ್ಟಿ ಏ, Snr ಪ್ರಶಾಂತ್ C H, Snr PPF ಪ್ರಕಾಶ್ K Y, Snr ಮೋಹನ್ ಕುಮಾರ್ D, Snr ಶೀನಪ್ಪ S, Snr V R ಹೆಗ್ಡೆ,Snr ಚಂದ್ರಶೇಖರ ಬಾನಜಾಲು, Snr ದಯಾನಂದ K ಆದರ್ಶ ಇವರೆಲ್ಲ ಉದ್ಘಾಟಕರು, ಪದಗ್ರಹಣ ಅಧಿಕಾರಿ, ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರ ಲಕ್ಕಿ ಡ್ರಾವನ್ನು SCI ಪುತ್ತೂರುನವರು ಮಾಡಿ ವಿಜೇತರಾಗಿ SCI ನೆಲ್ಯಾಡಿ ಲೀಜಿಯನ್ ನ ಸ್ಥಾಪಕ ಅಧ್ಯಕ್ಷರಾದ Snr PPF ಅಬ್ರಹಾಂ ವರ್ಗಿಸ್ ಮೂಡಿ ಬಂದರು, SCI ರಾಷ್ಟೀಯ ಅಧಿಕಾರಿಯಾದ Snr PPF ಕಿಶೋರ್ ಫೆರ್ನಾಂಡಿಸ್, ಪುತ್ತೂರು ವಿವಿಧ ರೋಟರಿ ಕ್ಲಬ್ ನ ಸದಸ್ಯರು, ಜೇಸಿ ಸದಸ್ಯರು ಊರಿನ ಹಿರಿಯರು ಚಂದ್ರಹಾಸ್ ಶೆಟ್ಟಿ, ಜಯ ಕುಮಾರ್ ರೈ ಕುಂಬ್ರ, ಜಿ ಲಕ್ಷ್ಮಿ ರಾಘವ ರೈ ಅಡಿಲು ಗುಂಡ್ಯಡ್ಕ, SCI ನೆಲ್ಯಾಡಿಯ Sಟಿಡಿಣ ಸರೋಜ, ಪುತ್ತೂರು SCI ಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

ಅತಿಥಿಗಳಿಗೆ SCI ಪುತ್ತೂರು ಲೀಜಿಯನ್ ನ ಸ್ಥಾಪಕ ಅಧ್ಯಕ್ಷರಾದ ಮಲ್ಲಿಕಾ ಜೆ ಆರ್ ರೈ ಗುಂಡ್ಯಡ್ಕ ರವರು ಸ್ಮರಣಿಕೆ ನೀಡಿ ಗೌರವಿಸಿದರು. ಸಭಾ ಆರಂಭದ ಅಧ್ಯಕ್ಷರಾದ Snr PPF ನಾರಾಯಣ N ಬಲ್ಯ ಕೊಲ್ಲಿಮಾರು ಸ್ವಾಗತಿಸಿ, SCI ಪುತ್ತೂರಿನ ಸ್ಥಾಪಕ ಕಾರ್ಯದರ್ಶಿ Snr ಎಂ ಪಿ ರೋಹಿಣಿ ಆಚಾರ್ಯ ವಂದಿಸಿದರು. ಉಪಾಹಾರ, ಭೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here