ಎಸ್ ಕೆ ಎಸ್ ಎಸ್ ಎಫ್ ಸ್ಥಾಪಕ ದಿನಾಚರಣೆ-ಸಮಸ್ತದ ಹಿರಿಯ ಕಾರ್ಯಕರ್ತರಿಗೆ ಗೌರವಾರ್ಪಣೆ ಹಾಗೂ ಸನ್ಮಾನ ಕಾರ್ಯಕ್ರಮ

0

ಪುತ್ತೂರು: ಎಸ್ ಕೆ ಎಸ್ ಎಸ್ ಎಫ್ ಪುತ್ತೂರು ವಲಯ ಸಮಿತಿಯಿಂದ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಸಮಸ್ತ ಹಾಗೂ ಎಸ್ ಕೆ ಎಸ್ ಎಸ್ ಎಫ್ ಗಾಗಿ ದುಡಿದ ಹಿರಿಯರಿಗೆ ಗೌರವಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಪುತ್ತೂರು ಬದ್ರಿಯಾ ಮದ್ರಸಾ ಹಾಲ್ ನಲ್ಲಿ ನಡೆಯಿತು.


ವಲಯಾಧ್ಯಕ್ಷ ಇಬ್ರಾಹಿಂ ಬಾತಿಷಾ ಹಾಜಿ ಪಾಟ್ರಕೋಡಿ ಅಧ್ಯಕ್ಷತೆ ವಹಿಸಿದ್ದರು.ಬದ್ರಿಯಾ ಮಸೀದಿ ಖತೀಬ ಅಬ್ಬಾಸ್ ಫೈಝಿ ಪುತ್ತಿಗೆ ಉದ್ಘಾಟಿಸಿ,ಸಂಘಟನೆಗೆ ಸಮಸ್ತದ ಪೂರ್ವಿಕ ಉಲಮಾಗಳ ಸಂಪೂರ್ಣ ಆಶೀರ್ವಾದವಿದ್ದು ಇಂದು ಜಗತ್ತಿನಾದ್ಯಂತ ಪಸರಿಸಲು ಸಾತ್ವಿಕರಾದ ಶಂಸುಲ್ ಉಲಮಾ,ಕಣ್ಣಿಯತ್ ಉಸ್ತಾದ್ರವರ ಪ್ರಾರ್ಥನೆಯ ಫಲವಾಗಿದೆಯೆಂದರು.

ಎಸ್ ಕೆ ಎಸ್ ಎಸ್ ಎಫ್ ನೂತನ ಜಿಲ್ಲಾಧ್ಯಕ್ಷ ಮುಹಮ್ಮದ್ ನವವಿ ಮುಂಡೋಳೆ ಸಂದೇಶ ಭಾಷಣ ಮಾಡಿ,ವಲಯ ಸಮಿತಿಯು ಸಮಸ್ತಕ್ಕಾಗಿ ದುಡಿದ ಹಿರಿಯರನ್ನು ಗುರುತಿಸಿ ಗೌರವಿಸುವ ಮೂಲಕ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗಿದೆ ಎಂದರು.ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ,ಎಸ್ ಐ ಸಿ ರಿಯಾದ್ ಸಮಿತಿಯ ಜಾಬಿರ್ ಫೈಝಿ ಬನಾರಿ,ಎಲ್.ಟಿ ರಝಾಕ್ ಹಾಜಿ ಶುಭ ಹಾರೈಸಿದರು.


ಸಮಾರಂಭದಲ್ಲಿ ಸಮಸ್ತ ಹಾಗೂ ಎಸ್ ಕೆ ಎಸ್ ಎಸ್ ಎಫ್ ಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಉಮರ್ ದಾರಿಮಿ ಸಾಲ್ಮರ,ಹಮೀದ್ ಹನೀಫಿ ಬೊಳ್ವಾರ್,ರಶೀದ್ ಹಾಜಿ ಪರ್ಲಡ್ಕ,ಕೆ ಎಂ ಬಾವ ಹಾಜಿ ಕೂರ್ನಡ್ಕ,ಎಲ್ ಟಿ ರಝಾಕ್ ಹಾಜಿ,ಯೂಸುಫ್ ಕೂರ್ನಡ್ಕ,ಮುಹಮ್ಮದ್ ಹಾಜಿ ಕಣಿಮಜಲು,ಬಿ.ಕೆ ಇಬ್ರಾಹಿಂ ಕೊಂಬಮೂಳೆ,ಎಂ ಡಿ ಹನೀಫ್ ಬೆಳಂದೂರು,ಉಸ್ಮಾನ್ ದಾರಿಮಿ ಉಜುರ್ಪಾದೆ,ಕೆ ಕಾಸಿಂ ದಾರಂದಕುಕ್ಕು,ಶರೀಫ್ ಸಾಲ್ಮರ,ಕೆ. ಎಂ.ಮುಹಮ್ಮದ್ ಕುಂಞ ಮೌಲವಿ ಪರ್ಲಡ್ಕ,ರಝಾಕ್ ಎಸ್ ಎನ್ ಪೊಲ್ಯ,ಬಿ ಇಬ್ರಾಹೀಂ ಬಡಕ್ಕಿಲ,ಎಸ್. ಎ ಅಬ್ದುಲ್ ಖಾದರ್ ಮುಸ್ಲಿಯಾರ್ ಪಾಟ್ರಕೋಡಿ,ಯೂಸುಫ್ ಹಾಜಿ ಮಿತ್ತೂರು,ಅಬ್ದುಲ್ಲಾ ಕುಂಞ ಮೊಟ್ಟೆತಡ್ಕ,ಅಬೂಬಕ್ಕರ್ ಕಲ್ಲರ್ಪೆ,ರಶೀದ್ ಹಾಜಿ ಕಲ್ಲಗುಡ್ಡೆ,ಇಬ್ರಾಹೀಂ ಮುಕ್ರಂಪಾಡಿ,ಮುಹಮ್ಮದ್ ಮಲಾರ್,ಅಬೂಬಕ್ಕರ್ ಮುಲಾರ್,ಸುಲೈಮಾನ್ ಪಾಪತಡ್ಕ,ಅಬ್ದುಲ್ ಹಮೀದ್ ಪಿ.ಸಿ.ಎನ್ ಕೂರ್ನಡ್ಕ,ಮುಹಮ್ಮದ್ ನೆರಿಗೆರಿ ಮುಕ್ವೆ,ಗೌಸ್ ವಿ.ಎಸ್ ವಿರಮಂಗಿಲ,ಯು ಮುಹಮ್ಮದ್ ಹಾಜಿ ಪಡೀಲ್,ಕುಂಞ ಮೋನು ಶಾಂತಿನಗರ,ಸಮದ್ ಹಾಜಿ ಕಲ್ಲೇಗ,ಅಬ್ದುಲ್ ಅಝೀಝ್ ಕೆದುವಡ್ಕ,ಯೂಸುಫ್ ಹಾಜಿ ಬಪ್ಪಳಿಗೆ ಎಂಬವರಿಗೆ ಗೌರವಾರ್ಪಣೆ ನಡೆಸಲಾಯಿತು.


ಜಿಲ್ಲಾಧ್ಯಕ್ಷ ಮುಹಮ್ಮದ್ ನವವಿ ಮುಂಡೋಳೆ,ಜಾಬಿರ್ ಫೈಝಿ ಬನಾರಿ,ಸಿ ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪಾಟ್ರಕೋಡಿ ಶಾಖೆಯ ಕಾರ್ಯದರ್ಶಿ ಅಬ್ದುಲ್ ಖಾದರ್ ತಮೀಮ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.


ಸಮಾರಂಭದಲ್ಲಿ ವಲಯ ಕೋಶಾಧಿಕಾರಿ ಶಾಫಿ ಇಂಜಿನಿಯರ್ ಪಾಪೆತ್ತಡ್ಕ,ಉಪಾಧ್ಯಕ್ಷ ಬಶೀರ್ ಮುಸ್ಲಿಯಾರ್,ಜೊತೆ ಕಾರ್ಯದರ್ಶಿಗಳಾದ ರಿಯಾಝ್ ಫೈಝಿ ಪಟ್ಟೆ,ನೌಶಾದ್ ಯಮಾನಿ ಬೀಟಿಗೆ,ಅಲ್ತಾಫ್ ಸಾಲ್ಮರ,ಕ್ಯಾಂಪಸ್ ಚೆಯರ್ಮಾನ್ ಫರ್ವಿಝ್ ಅಕ್ತರ್ ಪಡೀಲ್,ಸಹಚಾರಿ ಚೆಯರ್ಮಾನ್ ಕರೀಂ ಎಸ್ ಆರ್ ಸವಣೂರು,ವಿಖಾಯ ಚೆಯರ್ಮಾನ್ ಹಾಶಿಂ ಅಬ್ಬಾಸ್ ಮುರ,ಸದಸ್ಯರಾದ ಹನೀಫ್ ನಂದಿನಿ,ಸುಲೈಮಾನ್ ಕಲ್ಲಗುಡ್ಡೆ,ಕಲಂದರ್ ಸಂಪ್ಯ,ಮುಕ್ವೆ ಕ್ಲಸ್ಟರ್ ಅಧ್ಯಕ್ಷರಾದ ಫಾರೂಕ್ ವೀರಮಂಗಿಲ,ಕಾರ್ಯದರ್ಶಿ ಆದಂ ಕೂರ್ನಡ್ಕ,ಕಬಕ ಕ್ಲಸ್ಟರ್ ಅಧ್ಯಕ್ಷರಾದ ಅಬೂಬಕ್ಕರ್ ಬೀಟಿಗೆ,ಕಾರ್ಯದರ್ಶಿ ನೌಶಾದ್ ಪಾಟ್ರಕೋಡಿ,ಪುತ್ತೂರು ಕ್ಲಸ್ಟರ್ ಕಾರ್ಯದರ್ಶಿ ಸಲ್ಮಾನ್ ಸಾಲ್ಮರ,ಶರೀಫ್ ಮುಕ್ರಂಪಾಡಿ, ಹಮೀದ್ ಕೂರ್ನಡ್ಕ,ಬೊಳ್ವಾರ್ ಶಾಖಾಧ್ಯಕ್ಷ ನೌಶಾದ್ ಹಾಜಿ ಬೊಳ್ವಾರ್,ಸಾಲ್ಮರ ಶಾಖಾಧ್ಯಕ್ಷ ಅಸ್ಗರ್ ಸಾಲ್ಮರ,ಕೂರ್ನಡ್ಕ ಶಾಖಾಧ್ಯಕ್ಷ ಎಲ್.ಟಿ ಫಾರೂಕ್,ಬೀಟಿಗೆ ಶಾಖಾಧ್ಯಕ್ಷ ಅಬ್ದುಲ್ ಹಮೀದ್ ಸವಣೂರು ಶಾಖಾಧ್ಯಕ್ಷ ನಝೀರ್ ಮುಂಡತಡ್ಕ ಭಾಗವಹಿಸಿದ್ದರು.
ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಅಝ್ಹರಿ ಸ್ವಾಗತಿಸಿ,ವರ್ಕಿಂಗ್ ಕಾರ್ಯದರ್ಶಿ ಅಹ್ಮದ್ ಸಿನಾನ್ ಪರ್ಲಡ್ಕ ಧನ್ಯವಾದಗೈದರು.

LEAVE A REPLY

Please enter your comment!
Please enter your name here