ಅರಿಯಡ್ಕ: ಮಡ್ಯಂಗಳ ಕರ್ಕೇರ ಕುಟುಂಬಸ್ಥರ ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವ

0

ಅರಿಯಡ್ಕ: ಮೂಲ ಕೆಮ್ಮಣ ಬೈಲು ಅಳದಂಗಡಿ ನಾಗದೇವರು, ಧೂಮಾವತಿ ಮತ್ತು ಪರಿವಾರ ದೈವಗಳು ಮಡ್ಯಂಗಳ ಕರ್ಕೇರ ಕುಟುಂಬಸ್ಥರ ತರವಾಡು ಮನೆಯಲ್ಲಿ ಮಾ.4 ಮತ್ತು ಮಾ.5 ರಂದು ಶ್ರೀ ದೈವಗಳ ನೇಮೋತ್ಸವ ಜರುಗಿತು. ಬೆಳಿಗ್ಗೆ ಗಣಹೋಮ, ಶುದ್ಧಿ ಕಲಶ ಶ್ರೀ ಸತ್ಯನಾರಾಯಣ ಪೂಜೆ, ವೆಂಕಟ್ರಮಣ ದೇವರಿಗೆ ಹರಿಸೇವೆ, ಮುಡಿಪು ಕಾಣಿಕೆ ಅಪರಾಹ್ನ ರಾಹು ಗುಳಿಗನಿಗೆ ತಂಬಿಲ, ರಾತ್ರಿ ಗುಳಿಗ ದೈವ, ಸತ್ಯದೇವತೆ ಕಲ್ಲುರ್ಟಿ ದೈವ, ಕುಪ್ಪೆ ಪಂಜುರ್ಲಿ ದೈವ, ಕಲ್ಲಾಲ್ದ ಗುಳಿಗ ದೈವ, ವರ್ಣರ ಪಂಜುರ್ಲಿ ದೈವ ಮತ್ತು ಧೂಮಾವತಿ ದೈವಗಳಿಗೆ ನೇಮೋತ್ಸವ ನಡೆಯಿತು. ಬಳಿಕ ಸಾವಿರಾರು ಜನರಿಗೆ ಅನ್ನದಾನ ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬದ ಯಜಮಾನ ಬೇಳ ಸಂಕಪ್ಪ ಪೂಜಾರಿ, ಆಡಳಿತ ಸಮಿತಿ ಸದಸ್ಯರು, ಕುಟುಂಬಸ್ಥರು, ಊರಿನ ಭಕ್ತಾದಿಗಳು, ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here