ಕಂಚಿಲ ಮಹಾದೇವ ಮಿತ್ರ ಮಂಡಳಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

0

ಪುತ್ತೂರು: ಹಲವಾರು ಸಮಾಜಮುಖಿ‌ ಕೆಲಸಗಳ‌ ಮೂಲಕ ಗುರುತಿಸಿಕೊಂಡಿರುವ ಮಹಾದೇವ ಮಿತ್ರ ಮಂಡಳಿ ಕಂಚಿಲ ಇದರ ವತಿಯಿಂದ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಕಂಚಿಲದಲ್ಲಿ ನಡೆಯಿತು.ಕಂಚಿಲ, ಚೌಕದ ಪಾಲು, ನೂಜಿಪಾಡಿ ಹಾಗೂ ಬೀಡಿನಪಾಲು ಪರಿಸರದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯೆ ವಿಜಯ ಸುಳ್ಯ, ಅಧ್ಯಕ್ಷ ಉದಯ ಕಂಚಿಲ, ಗೌರವ ಸಲಹೆಗಾರಾದ ಕೃಷ್ಣಪ್ಪ ಬಂಗೇರ ,ಜಿನ್ನಪ್ಪ ನಾಯ್ಕ್, ಮಹಾಬಲ ಪಾದ್ರಿಮೂಲೆ, ಕಂಚಿಲ ಮಹಾದೇವ ಮಿತ್ರ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ವಿದ್ಯಾರ್ಥಿಗಳು, ಹೆತ್ತವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here