ಮೇ 31: ಕಾವು ಸ.ಮಾ.ಉ.ಹಿ.ಪ್ರಾ. ಶಾಲಾ ಸಹಶಿಕ್ಷಕ ಭಾಸ್ಕರ ಗೌಡ ನರಿಯೂರು ನಿವೃತ್ತಿ

0

ಪುತ್ತೂರು: ಕಾವು ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದ ಭಾಸ್ಕರ ಗೌಡ ನರಿಯೂರುರವರು ತಮ್ಮ ಸರಕಾರಿ ಸೇವೆಯಿಂದ ಮೇ 31 ರಂದು ಸೇವಾ ನಿವೃತ್ತಿಯಾಗುತ್ತಿದ್ದಾರೆ.

1998ರಲ್ಲಿ ಕಾವು ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ ಇವರು ಅಲ್ಲಿಯೇ ಸುದೀರ್ಘ 26 ವರ್ಷಗಳ ಕಾಲ ಸೇವೆಯಲ್ಲಿದ್ದರು.
ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ನರಿಯೂರಿನ ದಿ.ಕುಶಾಲಪ್ಪ ಗೌಡ ಹಾಗೂ ದಿ.ಲಿಂಗಮ್ಮ ದಂಪತಿಗಳ ಪುತ್ರರಾಗಿರುವ ಇವರು, ಪತ್ನಿ ಇಂದಿರಾಯಾಗಿದ್ದಾರೆ. ಹಿರಿಯ ಪುತ್ರ ಗಗನ್ ದೀಪ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿದ್ದಾರೆ. ದ್ವಿತೀಯ ಪುತ್ರ ಸಹನ್ ದೀಪ್ ಪದವಿಧರರಾಗಿದ್ದಾರೆ. ತೃತೀಯ ಪುತ್ರ ವರುಣ್ ದೀಪ್ ಪುತ್ತೂರಿನ ಅಕ್ಷಯ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here