ಸುಳ್ಯಪದವು : ಕಿಡ್ನಿ ಸಮಸ್ಯೆ- ಬಾಲಕಿಗೆ ಹಿಂಜಾವೇ ನೆರವು

0

ಬಡಗನ್ನೂರು : ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಪಡುವನ್ನೂ ಗ್ರಾಮದ ಪದಡ್ಕ ನಿವಾಸಿ ಬಾಲಕೃಷ್ಣ ನಾಯ್ಕರವರು ಬಡತನದಿಂದ ಕೂಲಿ ಕೆಲಸಮಾಡಿ ಜೀವನ ನಡೆಸುತ್ತಿದ್ದರು.ಮನೆಗೆ ಅಸರೆಯಾಗಿದ್ದ  ಇವರು ಕ್ಯಾನ್ಸರ್ ರೋಗಿಯಾಗಿದ್ದಾರೆ. ಪತ್ನಿ ಹೇಮಾವತಿರವರು ಶ್ರವಣ ದೋಷದಿಂದ ಬಳಲುತ್ತಿದ್ದಾರೆ.ಇವರ  ಪುತ್ರಿ ಕುಮಾರಿ ಅನನ್ಯ   ಸುಳ್ಯಪದವು ಸರ್ವೋದಯ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಾಲಕೃಷ್ಣ ಮತ್ತು ಹೇಮಾವತಿ ದಂಪತಿಗಳ  ಒಬ್ಬಳೇ ಮಗಳಾದ  ಈಕೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು,  ಆರ್ಥಿಕವಾಗಿ ಹಿಂದುಳಿದ ಈ ಕುಟುಂಬಕ್ಕೆ,  ಹಿಂದು ಜಾಗರಣ ವೇದಿಕೆ ಸುಳ್ಯಪದವು ಘಟಕ  ರೂ 10,032. ಸಹಾಯ ನಿಧಿ ನೀಡುವ  ಮುಖಾಂತರ  ಬಡವರ ಪಾಲಿಗೆ ಆಶಾಕಿರಣವಾಗಿದೆ.

ಈ ಸಂಧರ್ಭದಲ್ಲಿ ಹಿಂದು ಜಾಗರಣ ವೇದಿಕೆ ಗೌರವಾಧ್ಯಕ್ಷ ಗೋಪಾಲ ನಾಯಕ್ ಇಂದಾಜೆ, ಸುಳ್ಯಪದವು. ಅಧ್ಯಕ್ಷ ಅಶೋಕ್ ಪಿ. ಎಸ್.  ಪ್ರ. ಕಾರ್ಯದರ್ಶಿ ಸುಧೀರ್ ಶಬರಿನಗರ. ಬಡಗನ್ನೂರು ಗ್ರಾ. ಪಂ. ಸದಸ್ಯ ವೆಂಕಟೇಶ್ ಕನ್ನಡ್ಕ. ಜಾಗರಣ ವೇದಿಕೆಯ ಕೋಶಾಧಿಕಾರಿ ಚೇತನ್ ಕುಲಾಲ್, ಕಾರ್ಯದರ್ಶಿ ರಜತ್ ಬೀರಮೂಲೆ, ಅಚ್ಚುತ ಕನ್ನಡ್ಕ, ಆನಂದ ಪೂಜಾರಿ ಕನ್ನಡ್ಕ, ಚಂದ್ರಶೇಖರ ಬಂಡಾರಿ, ರಂಜಿತ್ ಮರದಮೂಲೆ, ಪ್ರವೀಣ್ ಮರದಮೂಲೆ, ಉದಯ ಶಬರಿನಗರ, ರಮೇಶ್ ಶಬರಿನಗರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here