![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕಾಣಿಯೂರು : ಇತ್ತೀಚಿಗೆ ನಿಧನರಾದ ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಸಕ್ರಿಯ ಸದಸ್ಯರಾಗಿದ್ದ ಉದಯಾನಂದ ಅಭಿಕಾರ ಅವರ ಕುಟುಂಬಕ್ಕೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಡೈರಿ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಸಂಘದ ಮೂಲಕ ಮರಣ ಸ್ವಾಂತ್ವಾನ ನಿಧಿಯಿಂದ ರೂ 50,000 ಚೆಕ್ ನ್ನು ಉದಯಾನಂದ ಅವರ ಪತ್ನಿಯಾದ ನಳಿನಾಕ್ಷಿಯವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಕಲ್ಲೂರಾಯ, ಉಪಾಧ್ಯಕ್ಷರಾದ ಕುಸುಮಾದರ ಇಡ್ಯಡ್ಕ, ನಿರ್ದೇಶಕರಾದ ಗೋಪಾಲಕೃಷ್ಣ ಬಾರೆಂಗಳ, ವಸಂತ ಪೂಜಾರಿ ದಲಾರಿ, ಗಣೇಶ ಮುಂಗ್ಲಿಮಜಲು, ವಾಸಪ್ಪ ಗೌಡ ನಾಣಿಲ, ಸದಾಶಿವ ಜತ್ತೋಡಿ, ರಾಮಚಂದ್ರ ಕೋಲ್ಪೆ, ರಾಜೀವಿ ಬೊಮ್ಮಳಿಗೆ, ಕುಸುಮಾವತಿ ಕಳ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗಣೇಶ್ ಉದನಡ್ಕ, ನಿರ್ದೇಶಕರಾದ ವಿಶ್ವನಾಥ ದೇವಿನಗರ, ಲೋಕೇಶ್ ಆತಾಜೆ, ಸಂಘದ ಮಾಜಿ ಅಧ್ಯಕ್ಷರಾದ ಧನಂಜಯ ಕೇನಾಜೆ, ಸಂಘದ ಸದಸ್ಯ ಚಂದ್ರಶೇಖರ ಖಂಡಿಗ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ದಮಯಂತಿ ಮುದುವ ಸ್ವಾಗತಿಸಿ, ವಂದಿಸಿದರು