ಸವಣೂರು: ಜನಜಾಗೃತಿ ವೇದಿಕೆಯ ವಲಯ ಸಮಿತಿ ಸಭೆ

0

ಸವಣೂರು: ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಸವಣೂರು ವಲಯ ಸಭೆಯು ಕಡಬ ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್.ಕೆ ಸವಣೂರು ಅವರ ಅಧ್ಯಕ್ಷತೆಯಲ್ಲಿ ಸವಣೂರು ಯುವಸಭಾವನದಲ್ಲಿ ಜು.5ರಂದು ನಡೆಯಿತು.

ಸಭೆಯಲ್ಲಿ ಜನ ಜಾಗೃತಿ ಕಾರ್ಯಕ್ರಮ, ನವಜೀವನ ಸದಸ್ಯರು ಸಂಘದ ರಚನೆ, ಸಭೆ, ಸ್ವಾಸ್ಥ ಸಂಕಲ್ಪವನ್ನು ನಡೆಸುವ ಬಗ್ಗೆ ಮಾಹಿತಿ ನೀಡಲಾಯಿತು. ಸಭೆಯಲ್ಲಿ ತಾಲೂಕು ಜನ ಜಾಗೃತಿ ವೇದಿಕೆಯ ಸಮಿತಿಯ ಸದಸ್ಯರಾದ ಗಿರಿಶಂಕರ ಸುಲಾಯ,ತಾರಾನಾಥ ಕಾಯರ್ಗ, ಲೋಕನಾಥ್ ವಜ್ರ ಗಿರಿ, ಜನ ಜಾಗೃತಿ ವೇದಿಕೆಯ ಸವಣೂರು- ಪುಣ್ಚಪ್ಪಾಡಿ ಗ್ರಾಮ ಸಮಿತಿ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು,ಬೆಳಂದೂರು ಗ್ರಾಮ ಸಮಿತಿ ಅಧ್ಯಕ್ಷ  ಜಯಂತ ಅಭೀರ,ಕಾಣಿಯೂರು ಗ್ರಾಮ ಸಮಿತಿ ಅಧ್ಯಕ್ಷ  ಸುರೇಶ್ ಓಡಬಾಯಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸವಣೂರು ವಲಯ ಒಕ್ಕೂಟದ  ಅಧ್ಯಕ್ಷ ರಾಮಚಂದ್ರ ಇಡ್ಯಡ್ಕ,ದೋಳ್ಪಾಡಿ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ, ಬೆಳಂದೂರು ಒಕ್ಕೂಟದ ಅಧ್ಯಕ್ಷ ಶೇಷಪ್ಪ ಅಭೀರ,ಸವಣೂರು ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತ್ತಡಿ,ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರಾದ ನಾರಾಯಣ ಗೌಡ ಪೂವ ,ಕೇಶವ ಚಾರ್ವಾಕ, ಸೀತಾರಾಮ, ಬಾಬು ಗೌಡ, ಹೊನ್ನಪ್ಪ ಗೌಡ ಕೂರೇಲು ಸೇವಾಪ್ರತಿನಿಧಿ ಅಮಿತಾ,ಪ್ರೇಮ,ಕಾವ್ಯ ಕಾಣಿಯೂರು ಕಾವ್ಯ ಚಾರ್ವಾಕ,ಮೀನಾಕ್ಷಿ, ಮನೋರಮ, ಪ್ರತಿಮಾ ಮೊದಲಾದವರು ಉಪಸ್ಥಿತರಿದ್ದರು.

ಗ್ರಾಮಾಭಿವೃದ್ದಿ ಯೋಜನೆಯ ಸವಣೂರು ವಲಯ ಮೇಲ್ವಿಚಾರಕರಾದ ವೀಣಾ ಕೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here