ಸ್ನೇಹಸಂಗಮ ಚಾಲಕ ಮಾಲಕರ ಸಂಘದಿಂದ ಧನಸಹಾಯ

0

ಪುತ್ತೂರು: ಅನಾರೋಗ್ಯದಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಪುತ್ತೂರು ಸ್ನೇಹಸಂಗಮ ಚಾಲಕ ಮಾಲಕರ ಸಂಘದ ಅಮ್ಚಿನಡ್ಕ ಘಟಕದ ಸದಸ್ಯ ಸಂತೋಷ್‌ರವರಿಗೆ ಸ್ನೇಹಸಂಗಮ ಚಾಲಕ ಮಾಲಕರ ಸಂಘದ ವತಿಯಿಂದ ಧನಸಹಾಯ ನೀಡಲಾಯಿತು. ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ದಾನಿಗಳ ಹಾಗೂ ಸದಸ್ಯರ ಸ್ನೇಹ ಸಂಗಮ ಹೆಲ್ಪ್ ಲೈನ್ ಎಂಬ ಹೆಸರಿನಲ್ಲಿ ವಾಟ್ಸಾಪ್ ಗುಂಪು ರಚಿಸಿ ಧನ ಸಂಗ್ರಹ ಮಾಡಿದ್ದು ಇದಕ್ಕೆ ಸ್ಪಂದಿಸಿದ ದಾನಿಗಳ ಸಹಕಾರದಲ್ಲಿ ಧನಸಹಾಯ ನೀಡಲಾಯಿತು.

ಪುತ್ತೂರು ಸ್ನೇಹಸಂಗಮ ಚಾಲಕ ಮಾಲಕರ ಸಂಘದ ಅಧ್ಯಕ್ಷ ಇಸ್ಮಾಯಿಲ್ ಬೊಳುವಾರು, ಉಪಾಧ್ಯಕ್ಷ ತಾರಾನಾಥ ಬನ್ನೂರು, ಜೊತೆ ಕಾರ್ಯದರ್ಶಿ ಹರೀಶ್ ತೆಂಕಿಲ, ಮಾಜಿ ಅಧ್ಯಕ್ಷ ಅರವಿಂದ್ ಪೆರಿಗೆರಿ, ಮಾಜಿ ಬೆಳ್ಳಿಹಬ್ಬದ ಅಧ್ಯಕ್ಷ ಸಿಲ್ವಿಸ್ಟರ್ ಡಿ. ಸೋಜಾ, ಅಮ್ಚಿನಡ್ಕ ಘಟಕ ಅಧ್ಯಕ್ಷ ಇಸ್ಮಾಯಿಲ್, ಕಾರ್ಯದರ್ಶಿ ಜನಾರ್ಧನಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here