ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಟ್ಯಾರ್ ಬೂತ್ ವತಿಯಿಂದ ಶ್ರಮದಾನ

0

ಪುತ್ತೂರು: ಹಂಟ್ಯಾರು ಶಾಲಾ ಅಂಗನವಾಡಿ ಸುತ್ತಮುತ್ತ ದಟ್ಟವಾದ ಹುಲ್ಲು ಬೆಳೆದಿದ್ದು ಹಾಗೂ ಮಳೆ ನೀರು ಹೋಗಲು ಸಮರ್ಪಕವಾದ ವ್ಯವಸ್ಥೆ ಇಲ್ಲದೆ ಅಲ್ಲಿನ ಶಿಕ್ಷಕರು ಹಾಗೂ ಮಕ್ಕಳು ನಡೆದಾಡಲು ಕಷ್ಟಪಡುತ್ತಿದ್ದು, ಇದನ್ನು ಮನಗಂಡ SDPI ಸಂಟ್ಯಾರ್ ಬೂತ್ ಕಾರ್ಯಕರ್ತರು ಅಂಗನವಾಡಿ ಸುತ್ತಮುತ್ತ ಹುಲ್ಲುಗಳನ್ನು ತೆರವುಗೊಳಿಸಿ ಹಾಗೂ ಮಳೆನೀರು ಹೋಗಲು ಸರಿಯಾದ ವ್ಯವಸ್ಥೆಯನ್ನು ಮಾಡಿದರು.

ಶ್ರಮದಾನ ಮಾಡಿದ ಎಲ್ಲಾ ಕಾರ್ಯಕರ್ತರಿಗೆ ಅಂಗನವಾಡಿ ವತಿಯಿಂದ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ SDPI ಸಂಟ್ಯಾರ್ ಬೂತ್ ಅಧ್ಯಕ್ಷರಾದ ಮಸೂದ್ ಸಂಟ್ಯಾರ್ , ಕಾರ್ಯದರ್ಶಿ ಜಲೀಲ್ ಝೆನಿತ್,ರಿಯಾಝ್ ಬಳಕ್ಕ ಹಾಗೂ ಶಾಫಿ ಮರಿಕೆ , ರಾಹಿಝ್ ಬಳಕ್ಕ , ಬಾದ್‌ಷಾ ಸಂಟ್ಯಾರ್ , ಶರೀಫ್ ನೀರ್ಕಜೆ , ಶಮೀರ್ H E , ಹಾಶಿಂ ರವರು ಸಹಕರಿಸಿದರು.

LEAVE A REPLY

Please enter your comment!
Please enter your name here