ರೋಟರಿ ಕ್ಲಬ್ ಪುತ್ತೂರು ಸ್ವರ್ಣ

0

ಅಧ್ಯಕ್ಷ:ಸುರೇಶ್ ಪಿ,ಕಾರ್ಯದರ್ಶಿ:ಸೆನೋರಿಟಾ ಆನಂದ್,ಕೋಶಾಧಿಕಾರಿ:ವಿಜಯ್ ಡಿ’ಸೋಜ

ಪುತ್ತೂರು: ರೋಟರಿ ಅಂತರ್ರಾಷ್ಟ್ರೀಯ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ 2024-25ನೇ ಸಾಲಿನ ಅಧ್ಯಕ್ಷರಾಗಿ ಸುರೇಶ್ ಪಿ, ಕಾರ್ಯದರ್ಶಿಯಾಗಿ ಸೆನೋರಿಟಾ ಆನಂದ್, ಕೋಶಾಧಿಕಾರಿಯಾಗಿ ವಿಜಯ್ ವಿಲ್‌ಫ್ರೆಡ್ ಡಿ’ಸೋಜರವರು ಆಯ್ಕೆಯಾಗಿದ್ದಾರೆ.


ಉಳಿದಂತೆ ಉಪಾಧ್ಯಕ್ಷರಾಗಿ ಪ್ರವೀಣ್ ರೈ ಸಾಂತ್ಯ, ಜೊತೆ ಕಾರ್ಯದರ್ಶಿಯಾಗಿ ಮೀನಾಕ್ಷೀ, ಸಾರ್ಜಂಟ್ ಎಟ್ ಆರ್ಮ್ಸ್ ಸುಭಾಶ್ ರೈ ಬೆಳ್ಳಿಪ್ಪಾಡಿ, ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರು, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಭಾಸ್ಕರ ಕೋಡಿಂಬಾಳ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಮಹಾಬಲ ಗೌಡ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಸುಧಾಕರ್ ಕೆ.ನಿಡ್ವಣ್ಣಾಯ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ದಿನೇಶ್ ಆಚಾರ್ಯ, ಯೂತ್ ಸರ್ವಿಸ್ ನಿರ್ದೇಶಕರಾಗಿ ಸುನಿಲ್ ಜಾಧವ್, ಚೇರ್‌ಮ್ಯಾನ್‌ಗಳಾಗಿ ಸದಾನಂದ ಆಚಾರ್ಯ(ಪಲ್ಸ್ ಪೋಲಿಯೋ), ದೀಪಕ್ ಬೊಳ್ವಾರು(ಟಿಆರ್‌ಎಫ್), ಜಯಂತ್ ಶೆಟ್ಟಿ ಕಂಬಳತ್ತಡ್ಡ(ಜಿಲ್ಲಾ ಪ್ರಾಜೆಕ್ಟ್), ದೀಪಕ್ ಮಿನೇಜಸ್(ಮೆಂಬರ್‌ಶಿಪ್), ರಾಮಣ್ಣ ರೈ ಕೈಕಾರ(ಟೀಚ್), ಯಶ್ವಂತ್ ಗೌಡ ಕಾಂತಿಲ(ವಿನ್ಸ್), ಮೋಹನ್ ಗೌಡ ನೆಲಪ್ಪಾಳ್(ವೆಬ್), ಸೀತಾರಾಮ ಗೌಡ(ಸಿಎಲ್‌ಸಿಸಿ), ಶೀನಪ್ಪ ಪೂಜಾರಿ(ವಾಟರ್ ಆಂಡ್ ಸ್ಯಾನಿಟೇಶನ್), ರೋಶನ್ ರೈ ಬನ್ನೂರು(ಪಬ್ಲಿಕ್ ಇಮೇಜ್), ಗಣೇಶ್(ಪರಿಸರ), ಸನತ್ ಕುಮಾರ್ ರೈ(ರೋಟರ‍್ಯಾಕ್ಟ್)ರವರು ಆಯ್ಕೆಯಾಗಿದ್ದಾರೆ.


ಅಧ್ಯಕ್ಷರ ಪರಿಚಯ:
ಆರ್ಯಾಪು ಗ್ರಾಮದ ಪೆಲತ್ತಡಿ ದಿ.ಪಕೀರ ಮತ್ತು ಮುದರು ದಂಪತಿ ಪುತ್ರರಾಗಿ ಜನಿಸಿದ ಸುರೇಶ್ ಪಿ.ರವರು ಪದವಿ ಶಿಕ್ಷಣವನ್ನು ಹೊಂದಿದ್ದು, 2001ರಲ್ಲಿ ಕರ್ನಾಟಕ ಸರ್ಕಾರದ ಸೇವೆಗೆ ಸೇರಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದಲ್ಲಿ ಲೆಕ್ಕಪರಿಶೋಧಕರಾಗಿ ಕರ್ತವ್ಯವನ್ನು ಸಲ್ಲಿಸುತ್ತಿದ್ದಾರೆ. ಶ್ರೀ ಅಮ್ಮನವರ ದೇವಸ್ಥಾನ ಆರ್ಯಾಪು ನೇರಳಕಟ್ಟೆ ಶ್ರೀ ಕ್ಷೇತ್ರದ ಧರ್ಮದರ್ಶಿಯಾಗಿರುವ ಇವರು ಸ್ಥಳೀಯ ಹಲವಾರು ದೇವಸ್ಥಾನ, ದೈವಸ್ಥಾನಗಳ ಬ್ರಹ್ಮಕಲಶೋತ್ಸವ ಸಮಿತಿಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಶ್ರೀ ಮಾರಿಯಮ್ಮ ದೇವಸ್ಥಾನ ಅರಿಯಡ್ಕ ಜಾರತ್ತಾರು ಶ್ರೀ ಕ್ಷೇತ್ರದ ಜೀರ್ಣೋದ್ದಾರ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಕೃಷಿ ಜೀವನದಲ್ಲಿ ವಿಶೇಷ ಆಸಕ್ತಿಯುಳ್ಳ ಇವರು ಸಣ್ಣ ರೈತರಾಗಿದ್ದು, ಅಡಿಕೆ, ತೆಂಗು, ಕರಿಮೆಣಸು ಮುಂತಾದ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಪುತ್ತೂರು ಇದರ ನೂತನ ಕಟ್ಟಡ ಸಮಿತಿಯ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ರೋಟರಿ ಸಂಸ್ಥೆಯಲ್ಲಿ ವಿವಿಧ ಹುದ್ದೆಯನ್ನು ನಿರ್ವಹಿಸಿರುವ ಇವರು ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ 2022-23ನೇ ಸಾಲಿನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅನುಭವವಿರುತ್ತದೆ. ಯಕ್ಷಗಾನ, ಭರತನಾಟ್ಯ, ಒಡಿಸ್ಸಿ ನೃತ್ಯ ಬಾಂಗ್ರಾ ನೃತ್ಯದ ಬಗ್ಗೆ ಆಸಕ್ತಿ ಹೊಂದಿರುವ ಇವರು ಕಾಲ್ಚೆಂಡು ಮತ್ತು ಕ್ರಿಕೆಟ್ ಕ್ರೀಡೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುತ್ತಾರೆ. ಪುಸ್ತಕವನ್ನು ಓದುವ ಬಗ್ಗೆ ಹವ್ಯಾಸವನ್ನು ಹೊಂದಿರುವ ಇವರು ಹಲವಾರು ಸಾಹಿತಿಗಳ ಪುಸ್ತಕಗಳು ಇವರ ಪುಸ್ತಕ ಸಂಗ್ರಹಣೆಯಲ್ಲಿದೆ. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿರುವ ಪತ್ನಿ ಶ್ರೀಮತಿ ಶಾಲಿನಿ, ಪುತ್ರ ಸನ್ವಿತ್ ಕುಮಾರ್, ಸಂಹಿತ್ ಕುಮಾರ್‌ರವರೊಂದಿಗೆ ಆರ‍್ಯಾಪುವಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.


ಕಾರ್ಯದರ್ಶಿ ಪರಿಚಯ:
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ರಾಬಿನ್ಸನ್ ಹಾಗೂ ಸರೋಜಿನಿ ರಾಬಿನ್ಸನ್ ದಂಪತಿ ಪುತ್ರಿಯಾಗಿ ಉಡುಪಿಯಲ್ಲಿ ಜನಿಸಿದ ಸೆನೋರಿಟಾ ಆನಂದ್‌ರವರು ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಕಲಾ ಪದವಿಯನ್ನು ಪಡೆದುಕೊಂಡರು. 2015ರಲ್ಲಿ ರೋಟರಿ ಸ್ವರ್ಣದ ಸ್ಥಾಪಕ ಸದಸ್ಯೆಯಾಗಿ, ಇನ್ನರ್‌ವ್ಹೀಲ್ ಕ್ಲಬ್ ಸದಸ್ಯೆಯಾಗಿ, ರೋಟರಿ ಸ್ವರ್ಣದ 2014-15ನೇ ಸಾಲಿನ ಕ್ಲಬ್ ಅಧ್ಯಕ್ಷೆಯಾಗಿ ಕ್ಲಬ್‌ನ್ನು ಮುನ್ನೆಡಿಸಿರುತ್ತಾರೆ. ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ಸೆನೋರಿಟಾ ಆನಂದ್‌ರವರು ಪತಿ ಆಸ್ಕರ್ ಆನಂದ್, ಪುತ್ರಿ ಮೇಘನಾ, ಪುತ್ರರಾದ ಶ್ರೇಯಸ್ ಆನಂದ್, ಸ್ವೀಕೃತ್ ಆನಂದ್‌ರವರನ್ನು ಹೊಂದಿರುತ್ತಾರೆ.


ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ವಿಜಯ್ ಡಿ’ಸೋಜರವರು ಮಾಯಿದೆ ದೇವುಸ್ ಚರ್ಚ್ ನ ಐಸಿವೈಎಂ ಸಂಘಟನೆಯ ಅಧ್ಯಕ್ಷರಾಗಿ, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ, ಡೊನ್ ಬೊಸ್ಕೊ ಕ್ಲಬ್ ನ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ರೋಟರಿ ಸ್ವರ್ಣದ ಸ್ಥಾಪಕ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕ್ರಿಕೆಟ್
ಹಾಗೂ ಬ್ಯಾಡ್ಮಿಂಟನ್ ಆಟಗಾರರಾಗಿರುವ ಇವರು ನಟನೆ ಮತ್ತು ನೃತ್ಯದಲ್ಲಿದಲ್ಲೂ ಒಲವನ್ನು ಹೊಂದಿರುತ್ತಾರ . ಎಲೆಕ್ಟ್ರಾನಿಕ್ ಡಿಪ್ಲೋಮಾ ಪದವೀಧರರಾಗಿರುವ ಇವರು ಮಂಗಳೂರಿನಲ್ಲಿ ಮಹಿಮಾ ಎಂಟರ್ಪ್ರೈಸಸ್ ಎನ್ನುವ ಹೆಸರಿನಲ್ಲಿ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. ಸಂತ ಫಿಲೋಮಿನ ಕಾಲೇಜಿನ ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಆಗಿರುವ ಪತ್ನಿ ಶ್ರೀಮತಿ ಸುಷ್ಮಾ ಕ್ರಾಸ್ತಾ ಹಾಗೂ ಮಗ ವಿಶ್ ಎಜ್ರ ಡಿಸೋಜ ರವರೊಂದಿಗೆ ಪುತ್ತೂರಿನ ಮುರ ಎಂಬಲ್ಲಿ ವಾಸ್ತವ್ಯ ಹೊಂದಿರುತ್ತಾರೆ

ಜು.11 ರಂದು ಪದ ಪ್ರದಾನ…
ಜು.11 ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಜರಗಲಿದ್ದು, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್‌ರವರು ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಿಡಿಜಿ ರಂಗನಾಥ್ ಭಟ್, ಗೌರವ ಅತಿಥಿಗಳಾಗಿ ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಸೂರ್ಯನಾಥ ಆಳ್ವ, ವಲಯ ಸೇನಾನಿ ವೆಂಕಟ್ರಮಣ ಗೌಡ ಕಳುವಾಜೆ, ಜಿಎಸ್‌ಆರ್ ಚಿದಾನಂದ ಬೈಲಾಡಿರವರು ಭಾಗವಹಿಸಲಿದ್ದಾರೆ ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here