ರೋಟರಿ ಪುತ್ತೂರು ಸ್ವರ್ಣದಿಂದ ರತಿರವರಿಗೆ ಸನ್ಮಾನ

0

ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ವತಿಯಿಂದ ಪುಡಾದ ಅಧ್ಯಕ್ಷ ಭಾಸ್ಕರ್ ಕೋಡಿಂಬಾಳರವರ ತೋಟದಲ್ಲಿ ಕೆಲಸ ಕಾರ್ಯ ಮಾಡಿಕೊಂಡಿರುವ ರತಿಯವರನ್ನು ಸನ್ಮಾನಿಸಲಾಯಿತು.


ತನ್ನ ಮಕ್ಕಳು, ಸೊಸೆಯಂದಿರು ಮೊಮ್ಮಕ್ಕಳೊಂದಿಗೆ ಪುತ್ತೂರಿನ ಕರ್ಮಲ ಎಂಬಲ್ಲಿ ವಾಸಿಸಿಕೊಂಡು ಬರುತ್ತಿರುವ ರತಿರವರ ಪತಿ ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದು, ಇಡೀ ಸಂಸಾರವನ್ನು ಮುನ್ನಡೆಸುವ ಭಾರ ಇವರ ಹೆಗಲ ಮೇಲೆ ಬಿದ್ದಿತು. ಆದರೂ ಧೃತಿಗೆಡದೆ ತನ್ನ ಮಕ್ಕಳನ್ನು ಬೆಳೆಸುವಲ್ಲಿ ಶ್ರಮಿಸಿದ್ದಾರೆ. ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ದುಡಿಯುವ ಇವರ ಗುಣವನ್ನು ಗುರುತಿಸಿದ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಜು.9 ರಂದು ಕ್ಲಬ್‌ನ ಸದಸ್ಯ ಭಾಸ್ಕರ ಕೋಡಿಂಬಾಳ ಇವರ ನಿವಾಸದಲ್ಲಿ ಸನ್ಮಾನಿಸಲಾಯಿತು.

ಕ್ಲಬ್‌ನ ಅಧ್ಯಕ್ಷ ಸುರೇಶ್ ಪಿ, ಉದ್ಯಮಿಗಳಾದ ಸೋಜಾ ಮೆಟಲ್ಸ್ ನ ಜೋನ್ ಕುಟಿನ್ಹಾ, ಸೇಡಿಯಾಪು ಕೋಸ್ಟಲ್ ಕೋಕೋನಟ್ ಇಂಡಸ್ಟ್ರಿಯ ಡೆನ್ನಿಸ್ ಮಸ್ಕರೇನ್ಹಸ್,ಪಡೀಲು ಶ್ರೀ ವಿಘ್ನೇಶ್ವರ ಸ್ಟೀಲ್ಸ್ ಅಂಡ್ ಹಾರ್ಡ್ ವೇರ್ಸ್ನ ನ ಸುಧೀರ್ ಶೆಟ್ಟಿ ಇವರು ಶುಭ ಹಾರೈಸಿದರು. ಸಭೆಯಲ್ಲಿ ಮ್ಯಾಕ್ಸಿಂ ಮೊಂತೆರೋ, ಬೆನ್ನಿ ವೇಗಸ್, ಶರ್ಮಿಳಾ ಶೆಟ್ಟಿ ಹಾಗೂ ಕುಟುಂಬದ ಸದಸ್ಯರು ಹಾಜರಿದ್ದರು. ಶಿಕ್ಷಕಿ ಶ್ರೀಮತಿ ಶುಭಲತಾ ಸ್ವಾಗತಿಸಿ, ಕ್ಲಬ್‌ನ ಸದಸ್ಯರಾದ ಸುಭಾಸ್ ರೈ ಬೆಳ್ಳಿಪ್ಪಾಡಿ ವಂದಿಸಿದರು.

LEAVE A REPLY

Please enter your comment!
Please enter your name here