ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

0

ಪುತ್ತೂರು: ಕುರಿಯ ಗ್ರಾಮದ ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆಗಸ್ಟ್‌ 16ರಂದು ನಡೆಯುವ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು.

ಸಮಿತಿಯ ಗೌರವಧ್ಯಕ್ಷೆ ಗೀತಾ ಪುಂಡರಿಕ ಅಡಪಾಂಗಾಯ ಇವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಜ್ಯೋತಿ ರಮೇಶ ಅಂಗಿಂತಾಯ,ಉಪಾಧ್ಯಕ್ಷರಾಗಿ ರೇವತಿ ರಾಮಣ್ಣ ನಾಯ್ಕ್, ಕಾರ್ಯದರ್ಶಿಯಾಗಿ, ಸುಮಿತ್ರ ವಿಠ್ಠಲ ಗೌಡ, ಕೋಶಾಧಿಕಾರಿಯಾಗಿ,ಸಂಧ್ಯಾ ಗಣೇಶ್ ಇವರನ್ನು ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ ಸಮಿತಿಯ, ನಿಕಟ ಪೂರ್ವ ಅಧ್ಯಕ್ಷೆ ಪೂರ್ಣಿಮಾ ನಾಯ್ಕ್, ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರಾಮಣ್ಣ ನಾಯ್ಕ್, ಅರ್ಚಕ ಶ್ರವಣ್ ಭಟ್ ಹಾಗೂ ಭಕ್ತರು ಉಪಸ್ಥಿತರಿದ್ದರು. ರೇಖನಾಥ್ ರೈ ಕಾರ್ಯಕ್ರಮ ನಿರೂಪಿಸಿದರು.ಬಳಿಕ ಇತ್ತೀಚೆಗೆ ನಿಧನರಾದ ದೇವಸ್ಥಾನದ ಪವಿತ್ರಪಾಣಿ ಶ್ರೀ ಗೋಪಾಲ ಕೃಷ್ಣ ಅಂಗಿಂತಾಯ ಇವರ ಧರ್ಮಪತ್ನಿ ಚಿತ್ರವತಿ ಅಂಗಿಂತಾಯ ಇವರಿಗೆ ದೇವಸ್ಥಾನದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here