ಜನಜಾಗೃತಿ ವೇದಿಕೆಯ ಕಡಬದ ವತಿಯಿಂದ ನಡೆದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ ಪ್ರಕಟ

0

ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ಇದರ ವತಿಯಿಂದ ನಡೆದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ ಬಂದಿದೆ.

“ಧೂಮಪಾನ-ಮದ್ಯಪಾನ, ಮಾದಕ ವ್ಯಸನ ಮುಕ್ತ ಸಮಾಜ” ವಿಷಯದಲ್ಲಿ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ನಿಲಿಷ್ಕಾ ನೆಹರುನಗರ ಪುತ್ತೂರು ಪ್ರಥಮ ,ಸಾತ್ವಿಕ್ ವಿ ಜೆ, ಬಂದರಿಮಜಲು ಮನೆ, ಕಳೆಂಜ ಗ್ರಾಮ, ಬೆಳ್ತಂಗಡಿ ತಾಲೂಕು ದ್ವಿತೀಯ,ಸೃಜನ್ ಆಚಾರ್ಯ, ಕೊಳಗುಡ್ಡೆ, ಕನ್ಯಾನ ನವ ಗ್ರಾಮ, ಹೆಬ್ರಿ ಕಾರ್ಕಳ ಉಡುಪಿ ಇವರು ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಬಹುಮಾನ ವಿತರಣೆ ಸಮಾರಂಭ ಆ.20ರಂದು ಕಡಬ ತಾಲೂಕಿನ ರಾಮಕುಂಜ ಶ್ರೀ ರಾಮಕುಂಜೇಶ್ವರ ವಿದ್ಯಾಲಯದಲ್ಲಿ ನಡೆಯಲಿದೆ ಎಂದು ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ.ಸವಣೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here