ಪುತ್ತೂರು: ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ, ತಂತಿ ಹಾಗೂ ಮರ ನೆಲಕ್ಕುರುಳಿದ್ದು ಬೈಕ್ ಸವಾರರೋರ್ವರು ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆ ಸರ್ವೆ ಗ್ರಾಮದ ಭಕ್ತಕೋಡಿ ಸಮೀಪದ ಕಲ್ಲಗುಡ್ಡೆ ಬಳಿ ಜು.25ರಂದು ಸಂಜೆ ನಡೆದಿದೆ.
ಸಂಜೆ ವೇಳೆ ಬೀಸಿದ ಗಾಳಿಗೆ ಮರ ವಿದ್ಯುತ್ ತಂತಿಗೆ ಬಿದ್ದಾಗ ವಿದ್ಯುತ್ ತಂತಿ ಕಂಬ ಸಮೇತ ರಸ್ತೆಗೆ ಬಿದ್ದಿದೆ. ಈ ವೇಳೆ ಅದೇ ರಸ್ತೆಯಲ್ಲಿ ರಿಕ್ಷಾ ಹಾಗೂ ಬೈಕ್ ಸಂಚರಿಸುತ್ತಿದ್ದು ಮರ ಬೀಳುವ ವೇಳೆ ರಿಕ್ಷಾ ಜಸ್ಟ್ ಪಾಸ್ ಆಗಿದೆ. ಮರ ಹಾಗೂ ವಿದ್ಯುತ್ ಕಂಬ ಬಿದ್ದ ಮಧ್ಯೆ ಬೈಕ್ ಸವಾರ ಸಿಕ್ಕಿ ಹಾಕಿಕೊಂಡಿದ್ದು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂದ ಮೆಸ್ಕಾಂ ಇಲಾಖೆಯವರು ಮರವನ್ನು ತೆರವು ಮಾಡಿದ್ದಾರೆ.