ಕಡಬ ಸರಸ್ವತೀ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ್ ದಿವಸ ಆಚರಣೆ

0

ಕಡಬ: ಇಲ್ಲಿನ ಸರಸ್ವತೀ ವಿದ್ಯಾಲಯ ಪ್ರಾಥಮಿಕ ವಿಭಾಗದಲ್ಲಿ ಕಾರ್ಗಿಲ್ ವಿಜಯ್ ದಿವಸ ಆಚರಿಸಲಾಯಿತು. ಮುಖ್ಯ ಅತಿಥಿ ಮಾಜಿ ಯೋಧ ರಾಧಾಕೃಷ್ಣ ಕುಳ ಬಲ್ಪ ತಾನು ಕಾರ್ಗಿಲ್ ಯುದ್ಧದಲ್ಲಿ ಸ್ವತಃ ಭಾಗವಹಿಸಿದ ತನ್ನ ಅನುಭವವನ್ನು ಹಾಗೂ ಅಲ್ಲಿಯ ಆ ಸಮಯದ ನೈಜ ಘಟನೆಯನ್ನು ಮಕ್ಕಳಿಗೆ ತಿಳಿಸಿದರು.ಮುಂದೆ ನೀವೆಲ್ಲರೂ ಭಾರತಮಾತೆಯ ಸೇವೆಗೆ ತಯಾರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಯೋಧ ನಮನ ಸಲ್ಲಿಸಲಾಯಿತು. ಸಂಸ್ಥೆಯ ಅಧ್ಯಕ್ಷ ರವಿರಾಜ್ ಶೆಟ್ಟಿ ಕಡಬ,ಯೋಧರನ್ನು ಸನ್ಮಾನಿಸಿ ಮಾತನಾಡಿದರು.ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಪ್ರಮೀಳಾ ಲೋಕೇಶ್, ಉಮೇಶ್ ಶೆಟ್ಟಿ ಸಾಯಿರಾಂ ಕಲ್ಲುಗುಡ್ಡೆ , ಯಶೋಧರ್ ಕೊಣಾಜೆ, ಚಿನ್ನಪ್ಪ ಗೌಡ ಪಂಜ. ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯಗುರು ಮಾಧವಕೋಲ್ಪೆ ಸ್ವಾಗತಿಸಿದರು, ಶಿಕ್ಷಕ ಗಿರೀಶ್ ಚೆನ್ನಕಜೆ ವಂದಿಸಿದರು. ಶಿಕ್ಷಕಿ ಪ್ರೇಮಲತಾ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ವನಿತಾ ಕಾರ್ಯಕ್ರಮ ನಿರೂಪಿದರು.

LEAVE A REPLY

Please enter your comment!
Please enter your name here