ಈಶ್ವರಮಂಗಲ ಪಂಚೋಡಿಯಲ್ಲಿ ತಲ್ವಾರು ಕಾಳಗ – ಮೂವರು ಪೊಲೀಸ್‌ ವಶಕ್ಕೆ

0

ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಲ ಪಂಚೋಡಿ ಸಾರ್ವಜನಿಕ ರಸ್ತೆಯಲ್ಲಿ ತಂಡವೊಂದು ತಲ್ವಾರು ಹಿಡಿದು ಹಲ್ಲೆಗೆ ಯತ್ನಿಸುತ್ತಿದ್ದ ಸಂದರ್ಭ ಸ್ಥಳಕ್ಕೆ ಆಗಮಿಸಿದ ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಜಂಬೂರಾಜ್ ಮಹಾಜನ್ ಅವರು ಆರೋಪಿಗಳಿಂದ ತಲ್ವಾರು ಕಸಿದು ಅವರನ್ನು ವಶಕ್ಕೆ ಪಡೆದ ಘಟನೆ ಜು.28ರ ರಾತ್ರಿ ನಡೆದಿದೆ.

ಪಂಚೋಡಿ ಸಾರ್ವಜನಿಕ ರಸ್ತೆಯಲ್ಲಿ ರಾಜೇಶ್ ಪಂಚೋಡಿ, ಪ್ರವೀಶ್ ನಾಯರ್, ರಾಕೇಶ್ ಪಂಚೋಡಿ, ಜಯರಾಜ್, ಪ್ರಜ್ವಲ್ ಮಡ್ಯಾಳಮಜಲು, ಚರಣ್ ಮಡ್ಯಾಳಮಜಲು, ಸಂಜನ್ ರೈ ಮತ್ತು ಇತರರು ಪರಸ್ಪರ ಬೈದಾಡಿಕಂಡು ಹೊಡೆದಾಟ ನಡೆಸುತ್ತಿದ್ದು, ರಾಕೇಶ್ ಪಂಚೋಡಿಎಂಬವರು ತಲ್ವಾರು ಹಿಡಿದು ಹಲ್ಲೆಗೆ ಯತ್ನಿಸುತ್ತಿದ್ದ ಸಂದರ್ಭ ಅದೇ ಸ್ಥಳಕ್ಕೆ ಬಂದ ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಜಂಬೂರಾಜ್ ಮಹಾಜನ್ ಮತ್ತು ಸಿಬ್ಬಂದಿಗಳು ಹಾಗು ಗೃಹರಕ್ಷಕದಳದ ಸಿಬ್ಬಂದಿಗಳು ರಾಕೇಶ್ ಪಂಚೋಡಿ ಅವರ ಕೈಯಿಂದ ತಲ್ವಾರು ಕಸಿದು ರಾಜೇಶ್ ಮತ್ತು ಸಂಜನ್ ರೈ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಲಾಟೆಯಲ್ಲಿದ್ದ ಉಳಿದವರು ಪರಾರಿಯಾಗಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಶಾಂತಿ ಭಂಗವಾಗುವಂತೆ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದುಕೊಂಡು, ಕೈ ಕೈ ಮಿಲಾಯಿಸಿಕೊಂಡು, ಮಾರಕ ಆಯುಧವಾದ ತಲ್ವಾರನ್ನು ಹಿಡಿದುಕೊಂಡು ಕಲಹವನ್ನುಂಟು ಮಾಡಿ ಅಪರಾಧ ಎಸಗಿರುವ ರಾಜೇಶ್ ಪಂಚೋಡಿ, ಪ್ರವೀಶ್ ನಾಯರ್, ರಾಕೇಶ್ ಪಂಚೋಡಿ, ಜಯರಾಜ್, ಪ್ರಜ್ವಲ್ ಮಡ್ಯಾಳಮಜಲು, ಚರಣ್ ಮಡ್ಯಾಳಮಜಲು, ಸಂಜನ್ ರೈ ಮತ್ತು ಇತರರ ಮೇಲೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲ ಸೆಕ್ಷನ್ 194(2), ಬಿಎನ್‌ಎಸ್‌ಎಸ್ 352, ಆರ್/ಡಬ್ಲ್ಯು 190ಬಿಎನ್‌ಎಸ್, 25(1ಬಿ), ಎಆರ್‌ಎಮ್‌ಎಸ್ ಆಕ್ ರಂತೆ ಪ್ರರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here