ಸುದಾನ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ

0

ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿ,ಯೋಧ ನಮನವನ್ನು ಸಲ್ಲಿಸಲಾಯಿತು.ಶಾಲೆಯ  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕಿ ಶೋಭಾ ನಾಗರಾಜ್ ದೀಪೋಜ್ವಲವನ್ನು ಮಾಡಿ ಮಾತನಾಡಿ   “ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ  ಸೈನಿಕರ ದೇಶಪ್ರೇಮ, ಮೆರೆದ ಶೌರ್ಯ,ಪಡೆದ ವಿಜಯ ಮತ್ತು ಮಾಡಿದ  ಬಲಿದಾನಗಳ ಬಗೆಗೆ  ವಿದ್ಯಾರ್ಥಿಗಳು ತಿಳಿದುಕೊಂಡು ಸ್ಪೂರ್ತಿಯನ್ನು ಪಡೆಯಬೇಕು, ದೇಶವೇ ನಮ್ಮ ಪ್ರಥಮ ಆದ್ಯತೆಯಾಗಬೇಕು ” ಎಂದರು.  ವಿದ್ಯಾರ್ಥಿಗಳಿಂದ ರಾಷ್ಟ್ರಜಾಗೃತಿ ಸಂದೇಶವುಳ್ಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಬೇಕಾದ ಅಗತ್ಯ ಮತ್ತು ಕರ್ತವ್ಯಗಳ ಬಗೆಗೆ ವಿದ್ಯಾರ್ಥಿ ಅದ್ವಿಜ್ ಮಾತನಾಡಿದರು. ಸಹಶಿಕ್ಷಕಿ ಶೈನಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಹಶಿಕ್ಷಕರಾದ ಗೀತಾ ಆಚಾರ್ಯ,ಹೇಮಲತಾ ಮತ್ತು ಸದಾಶಿವ ಭಟ್ ಸಹಕರಿಸಿದರು

LEAVE A REPLY

Please enter your comment!
Please enter your name here