ಲಯನ್ಸ್ ಪುತ್ತೂರು ಕ್ರೌನ್ ನಿಂದ ನಿವೃತ್ತ ಸೈನಿಕ ಸಂಜೀವ ಎಂ.ರವರಿಗೆ ಸನ್ಮಾನ

0

ಪುತ್ತೂರು: ಲಯನ್ಸ್ ಜಿಲ್ಲೆ 317 ಡಿ, ಪ್ರಾಂತ್ಯ 4, ವಲಯ ಎರಡರ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಆಶ್ರಯದಲ್ಲಿ 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಸಂಭ್ರಮದ ಸಲುವಾಗಿ ನಿವೃತ್ತ ಸೈನಿಕರಾದ ಕೃಷ್ಣನಗರ ಸಂಜೀವ ಎಂ. ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.


ಲಯನ್ಸ್ ನ ನಿಶಾ ಮಿನೆಜಸ್ ಸೈನಿಕ ಸಂಜೀವ ಎಂ.ಕೆ ರವರ ಕಿರು ಪರಿಚಯ ನೀಡಿದರು. ಸನ್ಮಾನ ಸ್ವೀಕರಿಸಿದ ನಿವೃತ್ತ ಸೈನಿಕ ಸಂಜೀವ ಎಂ. ಕೆ.ಯವರು ಸೇನೆಯಲ್ಲಿ ಅವರು ಹೇಗೆ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ವಿವರಿಸಿ ಮತ್ತು ದೇಶಭಕ್ತಿ ಎಲ್ಲರ ಜೊತೆ ಇರಬೇಕು ಎಂದು ಹೇಳಿದರು.


ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್, ಕಾರ್ಯದರ್ಶಿ ಲೀನಾ ಮಚಾದೊ, ಕೋಶಾಧಿಕಾರಿ ವಿಕ್ಟರ್ ಶರೂನ್ ಡಿಸೋಜ, ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ಸದಸ್ಯರಾದ ಅಂಟನಿ ಒಲಿವೆರಾ, ಲ್ಯಾನ್ಸಿ ಮಸ್ಕರೇನಸ್ ಬನ್ನೂರು, ನೋಯೆಲ್ ಸೆರಾವೊ, ಲಿಡ್ವಿನ್ ಸೆರಾಾವೊ, ಸೈನಿಕ ಸಂಜೀವ ಎಂ. ರವರ ಮಗಳು ರಮ್ಯಾ ಮತ್ತು ಅಳಿಯ ಸಹಜ್ ಕೆ.ವಿ.ಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here