ಬೀರಿಗ: ಧರೆ ಕುಸಿತದಿಂದ ದನದ ಹಟ್ಟಿಗೆ ಹಾನಿ – ಕೂದಲೆಳೆ ಅಂತರದಿಂದ ಪಾರಾದ ಕರು

0

ಪುತ್ತೂರು: ಜು.30ರ ಭಾರೀ ಮಳೆಗೆ ಚಿಕ್ಕಮುಡ್ನೂರು ಗ್ರಾಮದ ಬೀರಿಗದಲ್ಲಿ ಧರೆ ಕುಸಿತದಿಂದ ದನದ ಹಟ್ಟಿಗೆ ಹಾನಿಯಾಗಿದೆ. ಹಟ್ಟಿಯ ಬದಿಯಲ್ಲೇ ಕಟ್ಟಿ ಹಾಕಿದ ಕರುವೊಂದು ಮಣ್ಣಿನ ಕುಸಿತಕ್ಕೆ ಕೂದಲೆಳೆ ಅಂತರದಲ್ಲಿ ಪಾರಾಗಿದೆ.


ಚಿಕ್ಕಮುಡ್ನೂರು ಗ್ರಾಮದ ಬೀರಿಗ ಶಿವಪ್ಪ ಗೌಡ ಎಂಬವರ ಮನೆಯ ಹಿಂಬದಿ ಭರೆ ಕುಸಿತದಿಂದಾಗಿ ಮನೆಯ ಹಿಂಬದಿಯಲ್ಲಿನ ದನ ಹಟ್ಟಿಗೆ ಹಾನಿಯಾಗಿದೆ. ಮಣ್ಣು ಹಟ್ಟಿಯ ಮೇಲೆ ಬಿದ್ದ ಪರಿಣಾಮ ಹಟ್ಟಿಯ ಶೀಟ್‌ಗಳು ಹುಡಿಯಾಗಿದ್ದು, ಅಲ್ಲೇ ಪಕ್ಕದಲ್ಲಿ ಕಟ್ಟಿ ಹಾಕಿದ್ದ ಕರುವೊಂದರ ಪಕ್ಕದ ತನಕ ಮಣ್ಣಿನ ರಾಶಿ ಬಂದು ಬಿದ್ದಿದೆ. ಅದೃಷ್ಟವಶಾತ್ ಕರು ಕೂದಲೆಳೆ ಅಂತರದಲ್ಲಿ ಪಾರಾಗಿದೆ.

LEAVE A REPLY

Please enter your comment!
Please enter your name here