102 ನೆಕ್ಕಿಲಾಡಿ ನಿವಾಸಿ ರಮೇಶ್ ಹೊಳೆಗೆ ಬಿದ್ದು ಮೃತ್ಯು

0

ಪುತ್ತೂರು: ಕಡಬ ತಾಲೂಕಿನ 102 ನೆಕ್ಕಿಲಾಡಿ ನಿವಾಸಿ, ಕೂಲಿಕಾರ್ಮಿಕ ರಮೇಶ್(48ವ.)ಎಂಬವರು ಆಕಸ್ಮಿಕವಾಗಿ ಕಾಲುಜಾರಿ ಹೊಳೆಗೆ ಬಿದ್ದು ಮೃತಪಟ್ಟಿರುವ ಘಟನೆ ಆ.2ರಂದು ನಡೆದಿದೆ.


ರಮೇಶ್ ಅವರು ಆ.1ರಂದು ಬೆಳಿಗ್ಗೆ 7ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಹೋಗಿದ್ದು ಸಂಜೆಯಾದರೂ ಮನೆಗೆ ಬಂದಿರುವುದಿಲ್ಲ. ಆ.2ರಂದು ಬೆಳಿಗ್ಗೆ ಮನೆಯಿಂದ ಸುಮಾರು 4 ಕಿ.ಮೀ ದೂರದ ಅರಬಿ ಹೊಳೆಯಲ್ಲಿ ರಮೇಶನ ಮೃತದೇಹ ಇರುವುದಾಗಿ ರಬ್ಬರ್ ಇಲಾಖೆಯ ನೌಕರರೊಬ್ಬರು ಕರೆ ಮಾಡಿ ತಿಳಿಸಿದಂತೆ ಮನೆಯವರು ಬಂದು ನೋಡಿದಾಗ ರಮೇಶ್ ಹೊಳೆಯಲ್ಲಿ ಬಿದ್ದು ಮೃತಪಟ್ಟಿರುವುದು ತಿಳಿದುಬಂದಿದೆ. ರಮೇಶ್‌ರವರು ಓಟೆಕಜೆ ಕಡೆ ಹೋಗುವರೇ ಹೊಳೆ ದಾಟುತ್ತಿದ್ದ ಸಮಯ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಅವರ ಪತ್ನಿ ಲಲಿತಾ ಅವರು ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here