ಆತೂರು: ಶ್ರೀ ಸದಾಶಿವ ದೇವಸ್ಥಾನದಲ್ಲಿ ನಾಗರಪಂಚಮಿ

0

ಕಡಬ: ಕಡಬ ತಾಲೂಕು  ಕೊೖಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ಆ.9ರಂದು ಶ್ರೀ ನಾಗದೇವರಿಗೆ ಸೀಯಾಳ, ಕ್ಷೀರ ಅಭಿಷೇಕ ನಡೆಯಿತು.
ದೇವಳದ ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಯಧುಶ್ರೀ ಆನೆಗುಂಡಿ, ಮಾಜಿ ಸದಸ್ಯರಾದ ಸಂಜೀವ ಗೌಡ ವಳಡಮ, ವಿನಯ ರೈ ಕೊಲಪಟ್ಟೆ, ಉತ್ಸವ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಪದಾಧಿಕಾರಿಗಳಾದ ಧರ್ಣಪ್ಪ ಗೌಡ ಕೊರಿಕ್ಕಾರು, ಭವಾನಿಶಂಕರ ಪರಂಗಾಜೆ, ಚಂದ್ರಹಾಸ ರೈ ಬುಡಲೂರು, ದೇವಳದ ಕಾರ್ಯದರ್ಶಿ ಆಶೋಕ ಪಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here