ನಾಳೆ(ಆ.11): ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಲಿಕೆಯವರ ಸಮಾಜ ಸೇವಾ ಸಂಘದಿಂದ ಆಟಿ ದಿನ ಕಾರ್ಯಕ್ರಮ,ಸನ್ಮಾನ

0

ಪುತ್ತೂರು: ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ ಮತ್ತು ಕರ್ನಾಟಕ ರಾಜ್ಯ ಪಾಣಾರ, ಅಜಲ, ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಆಟಿ ದಿನ ಕಾರ್ಯಕ್ರಮ ಆ.11ರಂದು ಬೆಳಿಗ್ಗೆ ಪುತ್ತೂರು ಲಯನ್ಸ್ ಸೇವಾ ಮಂದಿರ ದಲ್ಲಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಸಂಘದ ತಾಲೂಕು ಅಧ್ಯಕ್ಷ ರವಿ ಎಂಡಸಾಗು ಸಭಾಧ್ಯಕ್ಷತೆ ವಹಿಸಲಿದ್ದು, ಹಿರಿಯ ಮಾರ್ಗದರ್ಶಕ ಕುಂಞಣ್ಣ ನಲಿಕೆ ಅರೆಳ್ತಾಡಿ ಸವಣೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ.ರಾ.ಪಾ.ಅ.ಯಾನೆ. ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ದಯನಂದ ಸೇರಾ ,ಸಂಪನ್ಮೂಲ ವ್ಯಕ್ತಿಯಾಗಿ ವಿಜಯ್ ಪಾಂಡಿ ಕುಡ್ಲ, ಅತಿಥಿಗಳಾಗಿ ರಾಮಣ್ಣ ಪಿಲಿಂಜ , ದೇವಪ್ಪ ಕೊಯಿನಾಡು ಮಡಿಕೇರಿ, ಸೇಸಪ್ಪ ಕೆ. ನಲಿಕೆ ಅಳದಂಗಡಿ ಬೆಳ್ತಂಗಡಿ, ಉಷಾ ಮೋನಪ್ಪ ಮಾಡಾವು , ಬಾಬು ಅಜಿಲ ಬಾಳಿಲ ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಸಂದರ್ಭದಲ್ಲಿ ಸನ್ಮಾನ ನಡೆಯಲಿದ್ದು, ಪುಟ್ಟು ಉಕ್ರ ಅಜಲಾಯ ಮಾಡಾವು, ಬಾಬು ಅಜಿಲ ಪಾರ ಬೆಟ್ಟಂಪಾಡಿ, ಗುಬ್ಬಿ ಕೆಮ್ಮಾರ ಪೆರ್ಲಂಪಾಡಿ, ಪಾಚು ಸವಣೂರು, ಕುಂಞ ನಲಿಕೆ ಕುಕ್ಕುಪುಣಿ ನಿಡ್ಪಳ್ಳಿ, ಕುಂಞ್ಞಣ್ಣ ನಲಿಕೆ ಅರೆಳ್ತಾಡಿರವರುಗಳಿಗೆ ಸನ್ಮಾನ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಾಲೂಕು ಅಧ್ಯಕ್ಷ ರವಿ ಎಂಡಸಾಗು, ಕಾರ್ಯದರ್ಶಿ ಕೃಷ್ಣ ಬುಳೇರಿಕಟ್ಟೆ, ರಾಜ್ಯಾಧ್ಯಕ್ಷ ದಯಾನಂದ ಸೇರಾ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here