ಆಲಂಕಾರು ಕೋಡಿಲ ಬಸ್ಸು ತಂಗುದಾಣ ಉದ್ಘಾಟನೆ

0

ಆಲಂಕಾರು: ಆಲಂಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪಿನಂಗಡಿ, ಕಡಬ,ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬದಿಯಲ್ಲಿ ನೆಕ್ಕರೆ ಕೋಡಿಲ ಎಂಬಲ್ಲಿ ಕೇಂದ್ರ ಸರಕಾರದ 15ನೇ ಹಣಕಾಸಿನ ಅನುದಾನದಲ್ಲಿ‌ ನಿರ್ಮಾಣಗೊಂಡ ಕೋಡಿಲ ಬಸ್ಸು ತಂಗುದಾಣವನ್ನು ಗ್ರಾ.ಪಂ ಅಧ್ಯಕ್ಷೆ ಸುಶೀಲ ಉದ್ಘಾಟಿಸಿ ಶುಭಹಾರೈಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷ ರವಿ ಪೂಜಾರಿ.ಕೆ, ಗ್ರಾಮ ಪಂಚಾಯತ್‌ ಸದಸ್ಯರಾದ ಶಾರದ, ಸದಾನಂದ ಆಚಾರ್ಯ, ಶ್ವೇತಕುಮಾರ್‌, ಸುಮತಿ ಕೆ, ರೂಪಶ್ರೀ, ಚಂದ್ರಶೇಖರ, ಕೃಷ್ಣ ಜಿ, ವಾರಿಜ ಕೆಸಿ , ನಿವೃತ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ ,ಆಲಂಕಾರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಗ್ರಾ.ಪಂ ಮಾಜಿ ಅಧ್ಯಕ್ಷ ಜಯಕರ ಪೂಜಾರಿ ಕಲ್ಲೇರಿ, ಕೇಶವ ಗೌಡ ಆಲಡ್ಕ, ಸೇರಿದಂತೆ ಗ್ರಾಮ ಪಂಚಾಯತ್‌ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾ.ಪಂ ಕಾರ್ಯದರ್ಶಿ ವಸಂತ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here