ಸರಕಾರಿ ನೌಕರರ ವಾಲಿಬಾಲ್ ಪಂದ್ಯಾಟ – ಪುತ್ತೂರಿನ ನಾಲ್ವರು ಶಿಕ್ಷಕರು ರಾಜ್ಯಮಟ್ಟಕ್ಕೆ

0

ಕೆಯ್ಯೂರು: 2023-24ನೇ ಸಾಲಿನಲ್ಲಿ ನಡೆದ ರಾಜ್ಯ ಸರಕಾರಿ ನೌಕರರ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಾಬು ಎಂ ಮುಖ್ಯ ಗುರುಗಳು ಕೆ ಪಿ ಎಸ್ ಕೆಯ್ಯೂರು, ಮಲ್ಲೆಶಯ್ಯ ಹೆಚ್ ಎಂ ಮುಖ್ಯ ಗುರುಗಳು ಸ.ಕಿ.ಪ್ರಾ.ಶಾಲೆ ಚೆನ್ನಾವರ, ಶ್ರೀಕಾಂತ್ ಎನ್. ಸ. ಕಿ.ಪ್ರಾಥಮಿಕ ಶಾಲೆ ಅರೆಲ್ತಡಿ, ಕೆ ವಿ ಜಾರ್ಜ್ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಸರ್ವೆ ಇವರು ಭಾಗವಹಿಸಿ ಜಿಲ್ಲೆಯ ಪುತ್ತೂರು ಕಡಬ ತಾಲೂಕುಗಳಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆ.17ರಿಂದ 19ರ ತನಕ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

LEAVE A REPLY

Please enter your comment!
Please enter your name here