ವಿದ್ಯಾಕುಟೀರದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

0

ಪುತ್ತೂರು: ಮಿತ್ತೂರು ಸಂಪ್ರತಿಷ್ಠಾನದ, ವಿದ್ಯಾಕುಟೀರದಲ್ಲಿ,78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಭಾರತೀಯ ಭೂಸೇನೆಯಲ್ಲಿ ನಿವೃತ್ತ ಕರ್ನಲ್ ಎಸ್ ಟಿ ರಮಾಕಾಂತನ್ ಇವರಿಂದ ಧ್ವಜಾರೋಹಣ, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಸಭಾಕಾರ್ಯಕ್ರಮದಲ್ಲಿ, ಸಂಪ್ರತಿಷ್ಠಾನದ ಅಧ್ಯಕ್ಷರಾದ ರಮೇಶ ಭಟ್ ಬಿ ಅಧ್ಯಕ್ಷತೆಯಲ್ಲಿ, ಕರ್ನಲ್ ಎಸ್ ಟಿ ರಮಾಕಾಂತನ್, ಶಿವಪ್ರಕಾಶ್ ಕಲ್ಲಸರ್ಪೆ ದೇಶಕ್ಕಾಗಿ ಪ್ರಾಣತೆತ್ತ ಸೈನಿಕರ, ಸ್ವಾತಂತ್ರ್ಯವೀರರ ಸ್ಮರಣೆ ಮಾಡಿದರು. ವಿಶ್ರಾಂತ ಸಾರ್ಜೆಂಟ್ ಶ್ರೀ ಶ್ರೀಪ್ರಕಾಶ ಕುಕ್ಕಿಲ ಕಾರ್ಯಕ್ರಮ ನಡೆಸಿಕೊಟ್ಟರು. ಸಂಪ್ರತಿಷ್ಠಾನದ ಕಾರ್ಯದರ್ಶಿಯಾದ ಎಮ್ ಎಚ್ ರಮೇಶ, ಖಜಾಂಚಿ ತಿರುಮಲೇಶ್ವರ ಭಟ್ ಪಿಲಿಂಜ, ಸಂಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here