ಸ್ವಾತಂತ್ರೋತ್ಸವದ ಪ್ರಯುಕ್ತ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಿಂದ ಪ್ರಜ್ಞಾ ಆಶ್ರಮದಲ್ಲಿ ಸಮ್ಮಿಲನ

0

ಪುತ್ತೂರು: 78ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಎಪಿಎಂಸಿ ರಸ್ತೆ ಆವಿನ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಿಂದ ಪ್ರಜ್ಞಾ ಆಶ್ರಮದಲ್ಲಿನ ವಿಶೇಷ ಚೇತನರೊಂದಿಗೆ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ಹಾಗೂ ಪ್ರಸ್ತುತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ|ಎಡ್ವಿನ್ ಡಿ’ಸೋಜ ಹಾಗೂ ಎಲ್‌ಐಸಿ ಆಫ್ ಇಂಡಿಯಾದ ನಿವೃತ್ತ ಆಡಳಿತ ಅಧಿಕಾರಿ ಪಿ.ರವೀಂದ್ರನಾಥ ನಾೖಕ್‌ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯಿಯ ಶಾಖಾ ಪ್ರಬಂಧಕಿ ಮೆಲಿಶಾ ತೋರಸ್‌ರವರೊಂದಿಗೆ ಪ್ರಜ್ಞಾ ಆಶ್ರಮಕ್ಕೆ ಬೆಡ್‌ಶೀಟ್ ಕೊಡುಗೆಯನ್ನು ನೀಡಲಾಯಿತು.

ಶಾಖಾ ಸಿಬ್ಬಂದಿ ಸುಶ್ಮಿತಾ ಮತ್ತು ಬಳಗ ಪ್ರಾರ್ಥಿಸಿದರು. ಸಿಬ್ಬಂದಿ ಅಕ್ಷತಾರವರು ಸ್ವಾಗತಿಸಿದರು. ಸಂಸ್ಥೆಯ ಸಾಲ ವಸೂಲಾತಿ ಅಧಿಕಾರಿ ಮಹೇಶ್ ಪ್ರಸಾದ್‌ರವರು ಸಂಸ್ಥೆಯ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಪ್ರಜ್ಞಾ ಆಶ್ರಮದ ಅಣ್ಣಪ್ಪರವರು ಉಪಸ್ಥಿತರಿದ್ದರು. ಶಾಖಾ ಸಿಬ್ಬಂದಿ ಹರ್ಷಿತ್ ವಂದಿಸಿ, ಆಕಾಂಕ್ಷ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here