ನೆಟ್ಟಣಿಗೆ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಾಮೋದರ ಮಣಿಯಾಣಿ ನಾಕೂರು ನಿಧನ

0

ಈಶ್ವರಮಂಗಲ: ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ, ಕೃಷಿಕ ದಾಮೋದರ ಮಣಿಯಾಣಿ ನಾಕೂರು (64ವ) ಅವರು ಆ.16ರಂದು ನಿಧನರಾದರು. 27 ವರ್ಷಗಳಿಂದ ನೆಟ್ಟಣಿಗೆ ಮಹಾಲಿಂಗೇಶ್ವರ ದೇವಳದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಇವರ ಆಡಳಿತಾವಧಿಯಲ್ಲಿ 2 ಬಾರಿ ದೇಗುಲದ ಬ್ರಹ್ಮಕಲಶೋತ್ಸವ, ಅತಿರುದ್ರ ಯಾಗ ಹಾಗೂ 2 ಬಾರಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಜಾಂಬ್ರಿ ಗುಹಾ ಪ್ರವೇಶ ಕಾರ್‍ಯಕ್ರಮ ನಡೆದಿತ್ತು. ದಾಮೋದರ ಮಣಿಯಾಣಿ ಅವರು ಸುಳ್ಯಪದವು ಬ್ರಹ್ಮ ಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರರಾಗಿಯೂ ಕಳೆದ 35 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಸುಲೋಚನ, ಪುತ್ರ ಶಿವಪ್ರಸಾದ್ , ಸೊಸೆ ಪ್ರೀತಿ ,ಪುತ್ರಿ ಪ್ರೀತಾ ಮತ್ತು ಅಳಿಯ ಸಂದೇಶ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here