ಸವಣೂರಿನಲ್ಲಿ ಮೆಸ್ಕಾಂನಿಂದ ಕೃಷಿ ನೀರಾವರಿ ಸ್ಥಾವರಗಳಿಗೆ ಆಧಾರ್ ಜೋಡಣೆ

0

ಪುತ್ತೂರು: ಮೆಸ್ಕಾಂ ಕುಂಬ್ರ ಉಪವಿಭಾಗ ವತಿಯಿಂದ ಕೃಷಿ ನೀರಾವರಿ ಸ್ಥಾವರಗಳಿಗೆ ಆಧಾರ್ ಜೋಡಣೆ ಮಾಡುವ ಶಿಬಿರವನ್ನು ಸವಣೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆಸಲಾಯಿತು. ಸುಮಾರು 500 ಕ್ಕೂ ಮೀರಿ ರೈತ ಬಾಂಧವರು ಶಿಬಿರಕ್ಕೆ ಭೇಟಿ ನೀಡಿ ಆಧಾರ್ ಜೋಡಣೆಯಲ್ಲಿ ಭಾಗವಹಿಸಿದರು. ಶಿಬಿರದಲ್ಲಿ ಮೆಸ್ಕಾಂ ಕುಂಬ್ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಹೆಚ್.ಶಿವಶಂಕರ್ , ಸವಣೂರು ಜೆ. ಇ ರಾಜೇಶ್, ಹಿರಿಯ ಸಹಾಯಕಿ ರಜನಿ, ವಿಷಯನಿರ್ವಾಹಕರಾದ ಯಶೋಧ, ಅಶ್ವಿನಿ, ಮೆಕ್ಯಾನಿಕ್ ರಂಜಿತ್, ಸ್ಥಳೀಯರಾದ ಮೋಹನ್ ರೈ ಕೆರೆಕೋಡಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಪ್ರಮೋದ್ ಕುಮಾರ್ ರೈ, ದಯಾನಂದ ಹಾಗೂ ಶಾರದಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here