ಸುದ್ದಿ ಬಿಡುಗಡೆಯ ವ್ಯವಸ್ಥಾಪಕ ಚಂದ್ರಶೇಖರ ಗೌಡ ಉಮಿಗದ್ದೆರವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಆರ್ಯಾಪು ಗ್ರಾಮದ ಮರಿಕೆ ನಿವಾಸಿ, ಪುತ್ತೂರು ಸುದ್ದಿ ಬಿಡುಗಡೆ ವ್ಯವಸ್ಥಾಪಕರಾಗಿದ್ದ ಚಂದ್ರಶೇಖರ ಗೌಡ ಉಮಿಗದ್ದೆರವರ ಶ್ರದ್ಧಾಂಜಲಿ ಕಾರ್ಯಕ್ರಮ ಆ.23ರಂದು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.

ಕುಟುಂಬದ ಹಿರಿಯರಾದ ಬಾಬು ಗೌಡ ಗೆಣಸಿನಕುಮೇರು, ಸುದ್ದಿ ಸಮೂಹಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ವರ್ತಕ ಸಂಘದ ಮಾಜಿ ಅಧ್ಯಕ್ಷ ಜಾನ್ ಕುಟಿನ್ಹಾರವರು ನುಡಿನಮನ ಸಲ್ಲಿಸಿದರು.

ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಮೃತರ ಪತ್ನಿ ಶೀಲಾವತಿ, ಪುತ್ರ ರೋಹಿತ್ ಉಮಿಗದ್ದೆ, ಶೋಭಾ ಶಿವಾನಂದ, ಸೃಜನ್ ಊರುಬೈಲು, ಸಿಂಚನಾ ಊರುಬೈಲು, ಹಾಗೂ ಉಮಿಗದ್ದೆ ಕುಟುಂಬಸ್ಥರು, ಸುದ್ದಿ ಸಿಬಂದಿಗಳು ಉಪಸ್ಥಿತರಿದ್ದರು. ಸುದ್ದಿ ಬಿಡುಗಡೆಯ ಉಮೇಶ್ ಮಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here