ಜಿ.ಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ.ದ ಆಡಳಿತ ಮಂಡಳಿಗೆ ಆಯ್ಕೆ

0

ಅಧ್ಯಕ್ಷರಾಗಿ ಇ.ನಾರಾಯಣ ಹೇರಳೆ ಪುನರಾಯ್ಕೆ, ಉಪಾಧ್ಯಕ್ಷರಾಗಿ ಶಿವಪ್ರಸಾದ್ ಎ

ಪುತ್ತೂರು: ಕೋರ್ಟ್ ರಸ್ತೆಯ ಇಂದಿರಾ ಕ್ಯಾಂಟೀನ್ ಎದುರುಗಡೆ ಕಾರ್ಯಾಚರಿಸುತ್ತಿರುವ .ಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ. ಇದರ 2024-29ರ ಅವಧಿಗೆ ಆಡಳಿತ ಮಂಡಳಿಯ ಚುನಾವಣಾ ಪ್ರಕ್ರಿಯೆಯು ಆ.24 ರಂದು ಸಹಕಾರಿ ಸಂಘದ ಕಛೇರಿಯಲ್ಲಿ ಚುನಾವಣಾ ರಿಟರ್ನಿಂಗ್ ಅಧಿಕಾರಿ ನವೀನ್ ಕುಮಾರ್ ಎಂ.ಎಸ್ ರವರ ನೇತೃತ್ವದಲ್ಲಿ ಜರಗಿತು.


ನೂತನ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಇ.ನಾರಾಯಣ ಹೇರಳೆರವರು ಪುನರಾಯ್ಕೆಗೊಂಡಿದ್ದು, ಉಪಾಧ್ಯಕ್ಷರಾಗಿ ಶಿವಪ್ರಸಾದ್ ಎ.(ಸಾಮಾನ್ಯ)ರವರು ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಶಿವಪ್ರಸಾದ್ ಡಿ, ರಾಮಚಂದ್ರ ರಾವ್ ವಿ, ವೆಂಕಟೇಶ್ ಎಂ, ಇ.ಗೋಪಾಲಕೃಷ್ಣ ಹೇರಳೆ, ಸದಾಶಿವ ಹೊಳ್ಳ(ಸಾಮಾನ್ಯ), ಲಕ್ಷ್ಮೀ ಐ, ಸುಧಾ ಎನ್.ರಾವ್ (ಮಹಿಳಾ)ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಮೋಹನ್ ಹೊಳ್ಳರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here