Puttur ಶ್ರೀ ಶಾರದಾ ಭಜನಾ ಮಂದಿರದಲ್ಲಿ ಪ್ರತಿಷ್ಠಾ ವರ್ಧಂತಿ, ಸನ್ಮಾನ ಕಾರ್ಯಕ್ರಮ

0

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ (Shri Mahalingeshwara Temple) ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.31ರಂದು ಪ್ರತಿಷ್ಠಾ ವರ್ಧಂತಿ ಸಂದರ್ಭದಲ್ಲಿ ರಾತ್ರಿ ಸನ್ಮಾನ ಕಾರ್ಯಕ್ರಮವು ನಡೆಯಿತು.


ಭಜನಾ ಮಂದಿರದ ನಿಕಟ ಪೂರ್ವ ಉಪಾಧ್ಶಕ್ಷ, ನಿವೃತ್ತಿ ಸೇನಾನಿ ಪಿ. ರಮೇಶ್ ಬಾಬುರವರ ತಂದೆ, ಮಂದಿರದ ಸ್ಥಾಪಕ ಸದಸ್ಯ ದಿ. ಸುಬ್ಬರಾಯ ಕಲ್ಲುರಾಯ ಹಾಗೂ ರಮೇಶ್ ಬಾಬುರವರ ಪತ್ನಿ ದಿ. ವಸಂತಿ ಟೀಚರ್‌ರವರ ಸ್ಮರಣಾರ್ಥವಾಗಿ ಸನ್ಮಾನ ಕಾರ್ಯಕ್ರಮ ನಡೆಯಿತು.


ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (rajyotsava award) ಪುರಸ್ತೃತ, ಮಂಗಳೂರು ಪ್ರಸಾರ ಭಾರತಿ ಆಕಾಶವಾಣಿ (akashvani) ʻಎʼ ಗ್ರೇಡ್‌ ಕಲಾವಿದ ಡಾ. ಪಿ.ಕೆ. ಗಣೇಶ್‌ ಹಾಗೂ ರಾಜ್ಯಮಟ್ಟದ ಕ್ರೀಡಾಪಟು, ಭಜನಾ ಮಂದಿರದ ಸಕ್ರೀಯ ಸದಸ್ಯ, ಮಂಗಳೂರು ಅಡ್ಯಾರು ಸಹ್ಯಾದ್ರಿ (sahyadri) ಕಾಲೇಜಿನ ವಿದ್ಯಾರ್ಥಿ, ಪುತ್ತೂರಿನ ಉರ್ಲಾಂಡಿ ದಿ. ರಾಮಕೃಷ್ಣ (ಕಿರಣ್ ಟೈಲರ್)ರವರ ಮೊಮ್ಮಗ ಪ್ರವೀತ್‌ರವರನ್ನು ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ರಮೇಶ್ ಬಾಬುರವರ ಪುತ್ರಿ ಪ್ರೀತಿ ರಾಧಿಕಾ, ಸಹೋದರಿ ನಳಿನಿ ಉರುವಾಲ್, ಅಳಿಯ ಹರ್ಷ ಮಂದಿರದ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here