ಪುತ್ತೂರು: ಆರ್ಯಾಪು ಗ್ರಾಮದ ಕೂರೇಲು ಕೆ.ಸಂಜೀವ ಪೂಜಾರಿಯವರ ಜಾಗದಲ್ಲಿ ನೂತನವಾಗಿ ನವೀಕರಣಗೊಂಡಿರುವ ಕೂರೇಲು ಕುಟುಂಬದ ನಾಗನಕಟ್ಟೆಯಲ್ಲಿ ಶ್ರೀ ನಾಗದೇವರ ಶಿಲಾ ಪ್ರತಿಷ್ಠಾ ಬ್ರಹ್ಮಕಲಶವು ಸೆ.12ರಂದು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಶ್ರೀ ನಾಗದೇವರಿಗೆ ನಿಧಿ ಕುಂಭ ಸಮರ್ಪಣೆ ಕಾರ್ಯಕ್ರಮ ಆ.30ರಂದು ನಡೆಯಿತು.
ನಾಗಸ್ಥಾನ ಚಿತ್ರಕೂಟದ ನಿಧಿ ಕುಂಭ ಸ್ಥಾಪನೆಯನ್ನು ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಯವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕೂರೇಲು ಶ್ರೀ ಮಲರಾಯ ದೈವಸ್ಥಾನ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ ಬ್ರಹ್ಮಕಲಶ ಹಾಗೂ ತರವಾಡು ಧರ್ಮದೈವಸ್ಥಾನದ ಮೇಲ್ಛಾವಣಿ ನವೀಕರಣಗೊಂಡು ಶ್ರೀ ಮಲರಾಯ ಬಂಟ, ಮಹಿಷಂತಾಯ, ಗುಳಿಗ ದೈವ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಸೆ.11 ಮತ್ತು 12ರಂದು ನಡೆಯಲಿದೆ.